ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ ಹೇಳಿಕೆಗೆ ಅದೃಷ್ಟದ ಸಿಎಂ ಏನನ್ನುತ್ತಾರೆ?

By Srinath
|
Google Oneindia Kannada News

dvs-accepts-he-is-lucky-cm-a-bsy-statement
ಬೆಂಗಳೂರು, ಫೆ. 22: 'ಡಿ ವಿ ಸದಾನಂದ ಗೌಡರು ಅದೃಷ್ಟದಿಂದ ಮುಖ್ಯಮಂತ್ರಿಯಾದವರು. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ' ಎಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ವ್ಯಂಗ್ಯಕ್ಕೆ ಮುಖ್ಯಮಂತ್ರಿ ಸದಾನಂದ ಗೌಡರು ನೇರ ಉತ್ತರ ನೀಡಿದ್ದಾರೆ: 'ಅದು ಜಗತ್ತಿಗೇ ಗೊತ್ತಿರುವ ವಿಚಾರ - ನಾನು ಮುಖ್ಯಮಂತ್ರಿಯಾಗಿದ್ದು ಅದೃಷ್ಟದಿಂದಲೇ. ನಾನು ಯಾವುದೇ ಒಬ್ಬ ವ್ಯಕ್ತಿಯ ಸಿಎಂ ಅಲ್ಲ. ನಾನು ಆ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡೊಲ್ಲ' ಎಂದಿದ್ದಾರೆ.

ಸುದ್ದಿಗಾರರಿಗೆ ತಾಕೀತು: ನಾನು ಬೇರೆಯವರ ಹೇಳಿಕೆ, ನ್ಯಾಯಾಲಯ ಅಥವಾ ಪೊಲೀಸ್‌ ಠಾಣೆಯಲ್ಲಿರುವ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡಬಾರದು ಎಂದು ತೀರ್ಮಾನಿಸಿದ್ದೇನೆ. ನೀವೂ ಅದನ್ನು ಕೇಳಬಾರದು ಎಂದು ಸುದ್ದಿಗಾರರಿಗೆ ತಾಕೀತು ಮಾಡಿದರು.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಎಲ್ಲ ಶಾಸಕರೂ ನನ್ನ ಮನೆಗೆ ಬರುತ್ತಾರೆ. ನಾನು ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ. ಎಲ್ಲರೂ ನನ್ನವರೇ ಎಂದು ಸೂಕ್ಷ್ಮವಾಗಿ ನುಡಿದರು. ಇದೇ ವೇಳೆ, ಲಿಂಗಾಯಿತ ಸಮುದಾಯದಲ್ಲಿ ಒಡಕುಂಟು ಮಾಡಲು ನಮ್ಮ ಪಕ್ಷದವರೇ ಯತ್ನಿಸುತ್ತಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಅವರನ್ನೇ ಕೇಳಿ ಎಂದಷ್ಟೇ ಉತ್ತರಿಸಿದರು.

English summary
The other day former chief minister B S Yeddyurappa had said that the present CM DV Sadananda Gowda is crowned out of pure luck. To this DVS has accepted that out of luck only he scaled to the CM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X