ಗುಜರಾತ್: ಶಿವರಾತ್ರಿ ಆಚರಣೆ ಕಾಲ್ತುಳಿತಕ್ಕೆ 6 ಬಲಿ

ಮಹಾ ಶಿವರಾತ್ರಿ ಪೂಜೆಗಾಗಿ ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರ ಮಹಾಪೂರ ಹರಿದುಬಂದಿತ್ತು. ಜೀಪೊಂದು ಬ್ರೇಕ್ ಫೈಲ್ ಆಗಿ ನಿಯಂತ್ರಣ ತಪ್ಪಿ ಜನಜಂಗುಳಿಯತ್ತ ನುಗ್ಗಿದಾಗ ಭಕ್ತರು ಆತಂಕದಿಂದ ದಿಕ್ಕಾಪಾಲಾಗಿ ಓಡತೊಡಗಿದರು. ಆ ವೇಳೆ ಕಾಲ್ತುಳಿತವುಂಟಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಾಫಿಕ್ ಜಾಮ್ ನಿಂದಾಗಿ ಸ್ಥಳಕ್ಕೆ ಆಂಬುಲೆನ್ಸ್ ವಾಹನಗಳು ಬರುವುದಕ್ಕೆ ತೊಡಕಾಗಿತ್ತು.
ಈ ಮಧ್ಯೆ, ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದುರ್ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ಒಂದು ಲಕ್ಷ ರುಪಾಯಿ ತುರ್ತು ಪರಿಹಾರ ಘೋಷಿಸಿದ್ದಾರೆ.












Click it and Unblock the Notifications