ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗೆ ಬೆಂಬಿಡದಂತೆ ಕಾಡುತ್ತಿರುವ ಬಂಧನ ಭೀತಿ

By Mahesh
|
Google Oneindia Kannada News

YS Jagan Mohan Reddy
ಹೈದರಾಬಾದ್, ಫೆ.15: ವೈಎಸ್ ಜಗನ್ ಮೋಹನ್ ರೆಡ್ಡಿ ಬಂಧನದ ಬಗ್ಗೆ ಸುದ್ದಿ ಕ್ಲೀಷೆ ಎನಿಸಿದರೂ ಸಿಬಐ ಮಾತ್ರ ಚಲ ಬಿಡದೆ ತನ್ನ ಪಟ್ಟು ಹಾಕುತ್ತಲೇ ಇದೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ವಿಚಾರಣೆಗೆ ಒಳಪಡಿಸಲು ಮುಂದಾಗಿರುವುದು ಜಗನ್ ಗೆ ಮುಳುವಾಗಲಿದೆ.

ಇದರ ಜೊತೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ತಯಾರಿಸಿರುವ ಸಿಬಿಐ ತಂಡ ಏ.2ರೊಳಗೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ.

ದೋಷಾರೋಪಣ ಪಟ್ಟಿಯಲ್ಲಿ ಜಗನ್ ರನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದೆ. ವಿಜಯ ಸಾಯಿ ರೆಡ್ಡಿಯನ್ನು ಆರೋಪಿ ನಂ.2 ಎಂದು ಗುರುತಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿದೆ.

ಜಗನ್ ಬಂಧನದ ಹಿಂದೆ ರಾಜಕೀಯ ತಂತ್ರ ಅಡಗಿರುವುದನ್ನು ಅಲ್ಲಗೆಳೆಯುವಂತಿಲ್ಲ. ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಬಂಧನವಾದರೆ ಕಾಂಗ್ರೆಸ್ ಪಕ್ಷದ ಶಾಸಕರು ಬಂಡಾಯ ಏಳುವ ಸಾಧ್ಯತೆಗಳಿದೆ.

ಆಂಧ್ರಪ್ರದೇಶದಲ್ಲಿ ಅಕಾಲಿಕ ಉಪ ಚುನಾವಣೆ ಎದುರಾಗುವ ಭೀತಿಯಿಂದ ತಪ್ಪಿಸಿಕೊಳ್ಳಲು ಕೇಂದ್ರದ ಕಾಂಗ್ರೆಸ್ ಸರ್ಕಾರ, ಜಗನ್ ಬಂಧನವನ್ನು ಮುಂದೂಡುತ್ತಾ ಬಂದಿದೆ. ಜಗನ್ ಬಂಧನದಿಂದ ರಾಜಕೀಯ ಲಾಭ ಪಡೆಯಲು ಎಲ್ಲಾ ಪಕ್ಷಗಳು ತಮಗೆ ತೋಚಿದ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

English summary
YS Jagan Mohan Reddy plan to escape from CBI detention is likely to fail as CBI is ready with chargedsheet against him. CBI is guizing IAS Srilakshmi again in Illegal assets case, later will submit chargesheet to CBI special court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X