ರೆಡ್ಡಿಗೆ ಬೆಂಬಿಡದಂತೆ ಕಾಡುತ್ತಿರುವ ಬಂಧನ ಭೀತಿ

YS Jagan Mohan Reddy
ಹೈದರಾಬಾದ್, ಫೆ.15: ವೈಎಸ್ ಜಗನ್ ಮೋಹನ್ ರೆಡ್ಡಿ ಬಂಧನದ ಬಗ್ಗೆ ಸುದ್ದಿ ಕ್ಲೀಷೆ ಎನಿಸಿದರೂ ಸಿಬಐ ಮಾತ್ರ ಚಲ ಬಿಡದೆ ತನ್ನ ಪಟ್ಟು ಹಾಕುತ್ತಲೇ ಇದೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ವಿಚಾರಣೆಗೆ ಒಳಪಡಿಸಲು ಮುಂದಾಗಿರುವುದು ಜಗನ್ ಗೆ ಮುಳುವಾಗಲಿದೆ.

ಇದರ ಜೊತೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ತಯಾರಿಸಿರುವ ಸಿಬಿಐ ತಂಡ ಏ.2ರೊಳಗೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ.

ದೋಷಾರೋಪಣ ಪಟ್ಟಿಯಲ್ಲಿ ಜಗನ್ ರನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದೆ. ವಿಜಯ ಸಾಯಿ ರೆಡ್ಡಿಯನ್ನು ಆರೋಪಿ ನಂ.2 ಎಂದು ಗುರುತಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿದೆ.

ಜಗನ್ ಬಂಧನದ ಹಿಂದೆ ರಾಜಕೀಯ ತಂತ್ರ ಅಡಗಿರುವುದನ್ನು ಅಲ್ಲಗೆಳೆಯುವಂತಿಲ್ಲ. ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಬಂಧನವಾದರೆ ಕಾಂಗ್ರೆಸ್ ಪಕ್ಷದ ಶಾಸಕರು ಬಂಡಾಯ ಏಳುವ ಸಾಧ್ಯತೆಗಳಿದೆ.

ಆಂಧ್ರಪ್ರದೇಶದಲ್ಲಿ ಅಕಾಲಿಕ ಉಪ ಚುನಾವಣೆ ಎದುರಾಗುವ ಭೀತಿಯಿಂದ ತಪ್ಪಿಸಿಕೊಳ್ಳಲು ಕೇಂದ್ರದ ಕಾಂಗ್ರೆಸ್ ಸರ್ಕಾರ, ಜಗನ್ ಬಂಧನವನ್ನು ಮುಂದೂಡುತ್ತಾ ಬಂದಿದೆ. ಜಗನ್ ಬಂಧನದಿಂದ ರಾಜಕೀಯ ಲಾಭ ಪಡೆಯಲು ಎಲ್ಲಾ ಪಕ್ಷಗಳು ತಮಗೆ ತೋಚಿದ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+