ಸಿಟ್ಟಿಗೆದ್ದ ಇನ್ಫೋಸಿಸ್ ಮೂರ್ತಿ ರಾಜೀನಾಮೆ

ಈ ಬಗ್ಗೆ ತಮ್ಮ ಅಸಮಾಧಾನ ಸೂಚಿಸಿ ಕಳೆದ ಡಿಸೆಂಬರಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಇನ್ಫಿ ಮೂರ್ತಿ ಪತ್ರ ಬರೆದಿದ್ದರು. ಅದರಲ್ಲಿ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಸ್ಪಷ್ಟಪಡಿಸಿದ್ದರು. ತಕ್ಷಣ, ಪ್ರಧಾನಿ ಕಚೇರಿಯು ನಾರಾಯಣ ಮೂರ್ತಿ ಸಲಹೆಯನ್ನು ಪರಿಗಣಿಸುವಂತೆ ವಾಣಿಜ್ಯ ಸಚಿವಾಲಯಕ್ಕೆ ಸೂಚಿಸಿತು. ಆದರೆ ಸಚಿವಾಲಯ ಪ್ರಧಾನಿ ಕಚೇರಿ ಸೂಚನೆಗೆ ಮಣೆ ಹಾಕಲಿಲ್ಲ.
ಜಮ್ಷೆಡ್ ಗೋದ್ರೇಜ್, ರಾಕೇಶ್ ಮಿತ್ತಲ್ ಮತ್ತು ಐಐಟಿ ಬಾಂಬೆ ನಿರ್ದೇಶಕ ದೇವಾಂಗ್ ಖಾಖರ್ ಅವರನ್ನು ಭಾರತದ ಕಡೆಯಿಂದ ಸದಸ್ಯರನ್ನಾಗಿ ಒಕ್ಕೂಟಕ್ಕೆ ನೇಮಿಸಿಕೊಳ್ಳಬೇಕು ಎಂದು ಇನ್ಫಿ ಮೂರ್ತಿ ಸೂಚಿಸಿದ್ದರು. ಆದರೆ ಇದನ್ನು ಪುರಸ್ಕರಿಸದೆ ಸಚಿವಾಲಯವು ಬೇರೆಯವರನ್ನು ಸದಸ್ಯರನ್ನಾಗಿ ನೇಮಿಸಿಕೊಂಡಿದೆ. ಈ ಮಧ್ಯೆ ವಾಣಿಜ್ಯ ಸಚಿವ ಆನಂದ ಶರ್ಮಾ ಅವರು ಈ ಸಂಬಂಧ ನಾರಾಯಣ ಮೂರ್ತಿ ಜತೆ ಮಾತುಕತೆ ನಡೆಸಿದರಾದರೂ ಮೂರ್ತಿ ರಾಜೀನಾಮೆ ಪ್ರಸ್ತಾವದಿಂದ ಹಿಂದೆ ಸರಿಯಲಿಲ್ಲ ಎನ್ನಲಾಗಿದೆ.












Click it and Unblock the Notifications