ಪೋಲಿ ಸರದಾರರು ಭೂಗತ: ಸ್ಪೀಕರ್ ನೋಟಿಸ್

ಸ್ಪೀಕರ್ ಬೋಪಯ್ಯ ನೋಟಿಸ್: ಅತ್ತ ದೆಹಲಿಯಿಂದ ಪಕ್ಷದ ವರಿಷ್ಠರು ಖಡಕ್ ಆದೇಶ ಹೊರಡಿಸುತ್ತಿದ್ದಂತೆ ರಾಜ್ಯ ವರಿಷ್ಠರೂ ಕೈಚೆಲ್ಲಿದ್ದರು. ಇದರಿಂದ ಧರಾಶಾಹಿಗಳಾದ ತ್ರಿಮೂರ್ತಿಗಳು ಬೆಳಗ್ಗೆ 8 ಗಂಟೆಗೆ ರಾಜ್ಯದ ವರಿಷ್ಠರ ಎದುರು ಮತ್ತೊಮ್ಮೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ರಾಜೀನಾಮೆ ಒಗಾಯಿಸಿ, ನಿರ್ಗಮಿಸಿದ ಸವದಿ, ಪಾಟೀಲ್ ಮತ್ತು ಪಾಲೇಮಾರ್ ನಂತರ ಈ ಕ್ಷಣದವರೆಗೂ ಎಲ್ಲೂ ಕಾಣಿಸಿಕೊಂಡಿಲ್ಲ.
ಕಳಂಕಿತ ತ್ರಿಮೂರ್ತಿಗಳು ವಿಧಾನಸಭೆಗೆ ಹಾಜರಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದವು. ಇದರಿಂದ ಅವರು ವಿಧಾನಸೌಧದತ್ತ ಹೆಜ್ಜೆ ಹಾಕದೇ ಹೋದರು. ಅತ್ತ ತಮ್ಮ ಸ್ವಕ್ಷೇತ್ರಗಳಲ್ಲಿ ಜನರು ತೀವ್ರವಾಗಿ ಆಕ್ರೋಶಗೊಂಡಿರುವುದನ್ನು ತಿಳಿದು ಅಲ್ಲಿಗೂ ತೆರಳಿಲ್ಲ. ಅವರ ಮೊಬೈಲುಗಳು ಸ್ವಿಚ್ ಆಫ್ ಆಗಿದ್ದು, ನಿಗೂಢ ಸ್ಥಳ ಸೇರಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ಮಧ್ಯೆ, ಮೂವರೂ ಕಳಂಕಿತರಿಗೆ ಸದನಕ್ಕೆ ಹಾಜರಾಗದಂತೆ ನಿರ್ಬಂಧ ಹೇರಲಾಗಿದೆ. ಜತೆಗೆ ಫೆ. 13 ರೊಳಗಾಗಿ ಪ್ರಕರಣದ ಕುರಿತು ಉತ್ತರಿಸುವಂತೆ ಸೂಚಿಸಿ ಸ್ಪೀಕರ್ ಬೋಪಯ್ಯ ನೋಟಿಸ್ ಸಹ ಜಾರಿ ಮಾಡಿದ್ದಾರೆ.












Click it and Unblock the Notifications