ಮಹಿಳೆಯಿಂದ ಮುಲಾಯಂಗೆ ಚಪ್ಪಲಿ ಸೇವೆ

ಮುಲಾಯಂ ಸಿಂಗ್ ಅವರು ಶನಿವಾರ ಚುನಾವಣಾ ಪ್ರಚಾರ ಭಾಷಣ ಮುಗಿಸಿ ಸಭೆಯಿಂದ ನಿರ್ಗಮಿಸುತ್ತಿದ್ದ ಸಂದರ್ಭದಲ್ಲಿ ಈ ಮಹಿಳೆಯು ಅವರತ್ತ ಗುರಿಯಿಟ್ಟು ಚಪ್ಪಲಿಯೆಸೆದಳು. ಆದರೆ ಅದು ಸ್ವಲ್ಪದರಲ್ಲಿ ಗುರಿತಪ್ಪಿ, ಮುಲಾಯಂಗೆ ತಾಗಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಕ್ಕೀಡಾದ ಮಹಿಳೆಗೆ...: ಚಪ್ಪಲಿ ಎಸೆದ ಮೂರ್ತಿ ಸಿಂಗ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಮೂರ್ತಿ, ಅತ್ಯಾಚಾರಕ್ಕೊಳಗಾಗಿದ್ದು 2009ರಲ್ಲಿ ಆಕೆಗೆ 2 ಲಕ್ಷ ರೂ. ನೆರವು ನೀಡುವುದಾಗಿ ಮುಲಾಯಂ ಹೇಳಿದ್ದರು. ಆದರೆ ಅವರು ಮಾತಿಗೆ ತಪ್ಪಿದ ಕಾರಣ ಚಪ್ಪಲಿ ಎಸೆದಿದ್ದಾಗಿ ಆಕೆ ಹೇಳಿದ್ದಾಳೆ. ಗಮನಾರ್ಹವೆಂದರೆ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಅತ್ಯಾಚಾರಕ್ಕೀಡಾದ ಮಹಿಳೆಯರಿಗೆ ಸರಕಾರಿ ಉದ್ಯೋಗ ನೀಡುವುದಾಗಿ ಮುಲಾಯಂ ಸಿಂಗ್ ಘೋಷಿಸಿದ್ದಾರೆ.












Click it and Unblock the Notifications