ಐಟಿ ಕನ್ನಡಿಗರಿಗೆ ಡಿವಿಜಿ ಕಗ್ಗ ವಾಚನ ಸ್ಪರ್ಧೆ

ಬಸವನಗುಡಿಯ 'ಸಮಾಜ ಸೇವಕರ ಸಮಿತಿ' ಯವರು ಪ್ರತಿವರ್ಷದಂತೆ ಈವರ್ಷ ಕೂಡ ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಚಾರ ಮಂಡನೆ, ನೃತ್ಯ ರೂಪಕ, ಮಂಕುತಿಮ್ಮನ ಕಗ್ಗದ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಗ್ಗ ಸ್ಪರ್ಧೆಯ ನಿಯಮಗಳು ಹೀಗಿದೆ:
* ತಂಡವೊಂದರಲ್ಲಿ ಕನಿಷ್ಠ ಇಬ್ಬರು ಭಾಗವಹಿಸಬೇಕು, ಗರಿಷ್ಠ ಮೂವರು ಇರಬಹುದು.
* ಮಂಕುತಿಮ್ಮನ ಕಗ್ಗದ ಯಾವುದೇ ಒಂದು ಪದ್ಯವನ್ನು ಪೂರ್ತಿಯಾಗಿ ಹಾಡಬೇಕು.
* ತಂಡವೊಂದಕ್ಕೆ 5 ನಿಮಿಷಗಳ ಸಮಯಾವಕಾಶವಿರುತ್ತದೆ.
* ಅಷ್ಟರಲ್ಲಿ ಅತಿ ಹೆಚ್ಚು ಕಗ್ಗಗಳನ್ನು ಸ್ಮೃತಿಶಕ್ತಿಯಿಂದ ಹಾಡುವ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತದೆ.
* ರಾಗ ಬದ್ಧವಾದ ಹಾಡುಗಾರಿಕೆಗೆ, ಭಾವಾಭಿನಯಕ್ಕೆ ಹೆಚ್ಚಿನ ಅಂಕಗಳನ್ನು ನೀಡಲಾಗುತ್ತದೆ.
*. ಹೀಗೆ ಮುಂದಿನ ಸುತ್ತುಗಳಲ್ಲಿ ಅರ್ಹ ತಂಡಗಳನ್ನು ಆರಿಸುತ್ತ ಅಂತಿಮ ಸುತ್ತಿನಲ್ಲಿ ಎರಡು ತಂಡಗಳನ್ನು ಆರಿಸಲಾಗುತ್ತದೆ.
ಮೊದಲನೆ ಮತ್ತು ಎರಡನೆ ಬಹುಮಾನಗಳನ್ನು 17 ಮಾರ್ಚ್ ರಂದು ನಡೆಯುವ ಡಿವಿಜಿಯವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ನೀಡಲಾಗುವುದು ಮತ್ತು ಕಗ್ಗಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುವ ಅವಕಾಶವಿರುತ್ತದೆ.
* ತಂಡವೊಂದಕ್ಕೆ ಪ್ರವೇಶ ಶುಲ್ಕ ರೂ 50/-
* ತಂಡಗಳು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕ ಫೆ.7,2012
* ಸ್ಪರ್ಧೆ ನಡೆಯುವ ದಿನಾಂಕ ಫೆ.11,12, 18, 19
ಸಮಾಜ ಸೇವಕರ ಸಮಿತಿಯನ್ನು ಸಂಪರ್ಕಿಸಿ:
#171, ಸುಬ್ಬರಾಮ್ ಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ಬಸ್ ನಿಲ್ದಾಣದ ಹಿಂಭಾಗ, ಬಸವನಗುಡಿ, ಬೆಂಗಳೂರು-560 004
* ರಾಜ್ ಕುಮಾರ್ : 94481 71069
* ರಾಘವೇಂದ್ರ ಅಗರ್ಖೇಡ್ : 98866 83008
* ಇಮೇಲ್: [email protected]
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications