ಅತ್ಯಾಚಾರ ಬಾಧಿತರಿಗೆ ಸರಕಾರಿ ನೌಕರಿ: ಮುಲಾಯಂ
ಏನಪಾ ಅಂದರೆ ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಸರಕಾರಿ ನೌಕರಿ ಕೊಡುವುದಾಗಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಘೋಷಿಸಿದ್ದಾರೆ. ಆದರೆ ಕಂಡೀಷನ್ ಅಪ್ಲೈ ಅನ್ನುವಂತೆ ಸಮಾಜವಾದಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಆ ಛಾನ್ಸು ಎನ್ನುತ್ತಿದೆ ಎಸ್ ಪಿ!
'ಅತ್ಯಾಚಾರದ ತವರೂರು' ಉತ್ತರ ಪ್ರದೇಶದಲ್ಲಿ ರೇಪ್ ಪ್ರಕರಣಗಳು ಮಿತಿಮೀರಿವೆ. ಈ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗುವುದು. ಬಾಧಿತ ಮಹಿಳೆಗೆ ಅಥವಾ ಆಕೆಯ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ನೌಕರಿ ನೀಡುವುದಾಗಿ ಮುಲಾಯಂ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಕಟಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವಿನ ಕನಸು ಕಾಣುತ್ತಿರುವ ಮುಲಾಯಂ ಅವರು ಅತ್ಯಾಚಾರಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ. ಪ್ರತಿ ವರ್ಷ ಬಡ ಮಹಿಳೆಯರಿಗೆ ವರ್ಷಕ್ಕೆ ಎರಡು ಸೀರೆ ವಿತರಿಸುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಆದರೆ ಇದೆಲ್ಲ ಕೈಗೂಡಬೇಕೆಂದರೆ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮತದಾರರನ್ನು ಅವರು ಓಲೈಸುತ್ತಿದ್ದಾರೆ.