ನನ್ನ ಗುಂಡಿಟ್ಟು ಸಾಯಿಸಿಬಿಡಿ:ಸಿಬಿಐಗೆ ಜಗನ್ ಮೊರೆ

ಗುರಜರಣ ಪಟ್ಟಣದಲ್ಲಿ ಓದಾರ್ಪು ಯಾತ್ರೆ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಜಗನ್, ಕಾಂಗ್ರೆಸ್ ಮತ್ತು ತೆಲುಗು ದೇಶಂ ನನ್ನ ವಿರುದ್ಧ ಪಿತೂರಿ ನಡೆಸಿದೆ. ನನಗೆ ಚಿತ್ರ ಹಿಂಸೆ ನೀಡುವುದೇ ಇವರ ಗುರಿಯಾಗಿದೆ. ಸುಮ್ಮನೆ ಈ ರೀತಿ ಕೇಸುಗಳನ್ನು ಹಾಕುತ್ತಾ ನನ್ನನ್ನು ಕಾಡುವ ಬದಲು ನೇರವಾಗಿ ಗುಂಡಿಟ್ಟು ಸಾಯಿಸಿಬಿಡಿ' ಎಂದು ಗುಡುಗಿದರು.
ಇತ್ತೀಚೆಗೆ ರಾಜಕೀಯದಲ್ಲಿ ಮೌಲ್ಯಗಳು ನಶಿಸುತ್ತಿರುವ ಬಗ್ಗೆ ಅತೀವ ಖೇದ ವ್ಯಕ್ತಪಡಿಸಿದ ಜಗನ್, ನನ್ನ ತಂದೆ ದಿವಂಗತ ವೈಎಸ್ ರಾಜಶೇಖರ್ ಅವರ ಸತ್ಯ, ನಿಷ್ಠೆಯನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುತಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸುವಂತೆ ಮತ್ತೊಮ್ಮೆ ಆಗ್ರಹಿಸಿದ ಜಗನ್, ನಾಯ್ಡು 'ಹೆರಿಟೇಜ್' ವ್ಯಾಪಾರದ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಹೇಳಿದರು.












Click it and Unblock the Notifications