ನಿಲೇಕಣಿಯ ಆಧಾರ ಕಾರ್ಡಿಗೆ ಬಿತ್ತು ಮತ್ತೊಂದು ಗೂಸಾ

ಯುಐಡಿ ಯೋಜನೆಯ ಅಸಂಬದ್ಧತೆ ಬಗ್ಗೆ ಕೇಂದ್ರ ಗೃಹಸಚಿವಾಲಯವು (ಪಿ. ಚಿದಂಬರಂ) ತನ್ನ ವಿರೋಧವನ್ನು ಮುಂದುವರಿಸಿದ್ದು, ಅಸಲಿಗೆ ಯಾರು ಬೇಕಾದರೂ ಆಧಾರ ಕಾರ್ಡಿಗೆ ನೋಂದಾಯಿಸಿಕೊಳ್ಳಬಹುದು. ಯಾರು ಬೇಕಾದರೂ ಈ ಕಾರ್ಡ್ ಪಡೆಯಬಹುದು. ಅದರ ಮೇಲೆ ಹಿಡಿತವೇ ಇಲ್ಲ.
ಈ ವಿಷಯದಲ್ಲಿ ನಾಗರಿಕರ ಕುರಿತು ಗೃಹ ಸಚಿವಾಲಯ ಒದಗಿಸುವ ಮಾಹಿತಿ ಅಧಿಕೃತವಾಗಿರುತ್ತದೆ. ಆದರೆ ಸಚಿವಾಲಯದ ಇಂತಹ ಮಾಹಿತಿಯೇ ಬೇಡ ಎನ್ನುತ್ತಿದ್ದಾರೆ ಯುಐಡಿ ಯೋಜನೆಯ ಪ್ರಭೃತಿಗಳು ಎಂದು ಗೃಹ ಸಚಿವಾಲಯ ಕಿಡಿಕಾರಿದೆ.
ಈ ಸಂಬಂಧ ಸಚಿವಾಲಯವು ಪತ್ರ ಮುಖೇನ ಪ್ರಧಾನಿ ಮನಮೋಹನ್ ಸಿಂಗ್ ಅವರ ಗಮನ ಸೆಳೆದಿದೆ. ಯುಐಡಿ ಕಾರ್ಡಿನಲ್ಲಿ ನಕಲಿ ಮಾಹಿತಿಗಳು ದಾಖಲಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ದೇಶದ ರಕ್ಷಣಾ ವ್ಯವಸ್ಥೆಗೆ ಮಾರಕವಾಗುತ್ತದೆ ಎಂದು ಖುದ್ದು ಚಿದಂಬರಂ ಹೇಳಿದ್ದಾರೆ. ಇದರಿಂದಾಗಿ ನಂದನ್ ನಿಲೇಕಣಿ ಅವರ ಆಧಾರ ಕಾರ್ಡಿನ ಭವಿಷ್ಯ ಏನೋ, ಎಂತೋ ಎಂಬ ಆತಂಕದಲ್ಲಿದೆ.












Click it and Unblock the Notifications