ಯಡಿಯೂರಪ್ಪ ಬಗ್ಗೆ ph.d ವಿದ್ಯಾರ್ಥಿ ಏನನ್ನುತ್ತಾರೆ ?

Pro. Prasannaa Kumar alongwith his Ph.D subject
ಬೆಂಗಳೂರು, ಜ.18: 'ನಾನು ಯುವಕನಾಗಿದ್ದಾಗ ಬಿಎಸ್ ಯಡಿಯೂರಪ್ಪ ರಾಜಕೀಯ ಏಳುಬೀಳುಗಳನ್ನು ಹತ್ತಿರದಿಂದ ಕಂಡಿದ್ದೆ. ಸೈಕಲ್ ತುಳಿದುಕೊಂಡೇ ಜನರ ಭೇಟಿಗೆ ಹೊರಡುತ್ತಿದ್ದರು. ಇಂತಿಪ್ಪ ಜನನಾಯಕನ ಬಗ್ಗೆಯೇ ನಾನು ಅಧ್ಯಯನ ನಡೆಸಿರುವುದು' ಎನ್ನುತ್ತಾರೆ 45 ವರ್ಷದ ಪ್ರಸನ್ನ ಕುಮಾರ್.

'ಯಡಿಯೂರಪ್ಪ ಅವರದು ಅತ್ಯಂತ ಸಾಧಾರಣ ಆರಂಭವಾಗಿತ್ತು. ಜನರೇ ಅವರನ್ನು ಗುರುತಿಸಿದರು. ಚಳವಳಿಗಳಲ್ಲಿ ಅಗ್ರ ಜನನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಿಸ್ಸಂಶಯವಾಗಿ ಅವರೇ ಕಾರಣ.

ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಪಕ್ಷದ ವತಿಯಿಂದ ಇನ್ನೂ ಒಬ್ಬರು ಮಾತ್ರವೇ ಚುನಾಯಿತರಾಗಿದ್ದರು. ಆದರೆ ಅದೇ ಪಕ್ಷದ ಶಾಸಕರ ಸಂಖ್ಯೆ ಈಗ ಶತಕ ಬಾರಿಸಿದೆ' ಎಂದು ಯಡಿಯೂರಪ್ಪ ಬಗ್ಗೆ ತುಂಬು ಅಭಿಮಾನದಿಂದ ಹೇಳುತ್ತಾರೆ ಪ್ರಸನ್ನ ಕುಮಾರ್.

ಯಡಿಯೂರಪ್ಪ ಬಗ್ಗೆ ಪಿಎಚ್. ಡಿ ಮಾಡುವ ಸಲುವಾಗಿ ನಾನು ಮೊದಲು ಬೂಕನಕೆರೆಗೆ ಭೇಟಿ ನೀಡಿದೆ. ಯಡಿಯೂರಪ್ಪ ಎದುರು ಕುಳಿತು ಅವರ ಜೀವನದ ಪದರುಗಳನ್ನು ಬಿಡಿಸುತ್ತಾ ಹೋದೆ. ಅವರ ಅಂದಿನ ಒಡನಾಡಿಗಳ ಜತೆ ಆತ್ಮೀಯ ಚರ್ಚೆ ನಡೆಸಿದೆ.

ಅವರೊಬ್ಬ ಕಡುಕಷ್ಟ ಜೀವಿ ಎಂದು ಸ್ವತಃ ಅವರ ರಾಜಕೀಯ ವಿರೋಧಿಗಳೇ ಬಣ್ಣಿಸಿದರು ಎಂದು ಯಡಿಯೂರಪ್ಪ ಅಧ್ಯಯನ ವಿದ್ಯಾರ್ಥಿ ಪ್ರಸನ್ನ ಕುಮಾರ್ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+