ಈ ದಂಪತಿಗಳಿಗೆ ಐಐಟಿ ವಿದ್ಯಾರ್ಥಿಯ ವೀರ್ಯವೇ ಬೇಕಂತೆ!
ಮುಂಬೈ, ಜ. 18 : ಹುಡುಗ ಐಐಟಿ ವಿದ್ಯಾರ್ಥಿಯಾಗಿರಬೇಕು (ಬುದ್ಧಿವಂತನಾಗಿರಬೇಕು ಅಂತ ವಿಶೇಷವಾಗಿ ಹೇಳಬೇಕಾಗಿಲ್ಲ), ಆರೋಗ್ಯವಂತನಾಗಿರಬೇಕು, ಕೆಟ್ಟ ಚಟಗಳಿರಬಾರದು, ಎತ್ತರವಾಗಿರಬೇಕು, ಬೆಳ್ಳಗಿದ್ದರೆ ಉತ್ತಮ, ಸುಶೀಲನಾಗಿರಬೇಕು, ಅಂದವಾಗಿರದಿದ್ದರೂ ತೊಂದರೆಯಿಲ್ಲ.
ಇವುಗಳು ಕನ್ಯೆಯ ಮಾತಾಪಿತೃಗಳು ತಮ್ಮ ಮಗಳಿಗಾಗಿ ಹುಡುಕುತ್ತಿರುವ ವರನಲ್ಲಿರಬೇಕಾದ ಗುಣಗಳಲ್ಲ. ಚೆನ್ನೈನ ದಂಪತಿಗಳಿಬ್ಬರು ಕೇಳುತ್ತಿರುವುದು ಇಂತಹ ಸದ್ಗುಣ ಸಂಪನ್ನನ ವೀರ್ಯವನ್ನು! ದಯವಿಟ್ಟು ಐಐಟಿಯಲ್ಲಿ ಓದುತ್ತಿರುವ ಈ ಗುಣಗಳುಳ್ಳ ವ್ಯಕ್ತಿ ತನ್ನ ವೀರ್ಯ ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂದು ಆನ್ಲೈನ್ ಮುಖಾಂತರ ಜಾಹೀರಾತು ನೀಡಿದ್ದಾರೆ. [ಬ್ರಾಹ್ಮಣ ಹುಡುಗನ ವೀರ್ಯಕ್ಕೆ ಭಾರೀ ಬೇಡಿಕೆ]

ಈ ಸುದ್ದಿ ಭಾರತದ ಎಲ್ಲಾ ಐಐಟಿಗಳನ್ನು ಮಾತ್ರವಲ್ಲ, ಎಲ್ಲ ನಾಗರಿಕರನ್ನು ದಂಗುಬಡಿಸಿದೆ. ಕೇಳರಿಯದ ಈ ವಿದ್ಯಮಾನದಿಂದ ಸ್ತಂಭೀಭೂತರಾಗಿದ್ದಾರೆ. ಕೆಲವರಿಗೆ ಇದು ಸೋಜಿಗ ತಂದರೆ, ಕೆಲವರಿಗೆ ಸಾಕಷ್ಟು ಮುಜುಗರವನ್ನೂ ಉಂಟುಮಾಡಿದೆ. "ಇದು ಅಸಹ್ಯಕರ" ಎಂದು ಒಬ್ಬ ವಿದ್ಯಾರ್ಥಿ ಪ್ರತಿಕ್ರಿಯೆ ನೀಡಿದ್ದಾನೆ. ಬೇಕಿದ್ದರೆ ಐಐಟಿ-ಐಐಎಂ ಕಾಂಬಿನೇಷನ್ ವಿದ್ಯಾರ್ಥಿಯಿಂದ ವೀರ್ಯ ಪಡೆಯಲಿ ಎಂದು ಇನ್ನೊಬ್ಬ ವ್ಯಂಗ್ಯವಾಡಿದ್ದಾನೆ.
ಇಷ್ಟ ಇದ್ದವರು ಈಮೇಲ್ ಅಥವಾ ಎಸ್ಎಂಎಸ್ ಮುಖಾಂತರ ಸಂಪರ್ಕಿಸಬೇಕಾಗಿ ಕೋರಲಾಗಿದೆ. ವೀರ್ಯ ದಾನ ಮಾಡಿದವರಿಗೆ ನೀಡಲಾಗುವ ಮೊತ್ತ ಎಷ್ಟು ಗೊತ್ತೆ? 20 ಸಾವಿರ ರು. ಮಗುವಿಗಾಗಿ ಹಂಬಲಿಸುತ್ತಿರುವ ಈ ದಂಪತಿಗಳ ಕೋರಿಕೆಯನ್ನು ಯಾರಾದರೂ ಮನ್ನಿಸುವರೆ? [ಮೃತ ಪತಿಯ ವೀರ್ಯಕ್ಕಾಗಿ ಬೇಡಿಕೆ ಇಟ್ಟ ಪತ್ನಿ]
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications