ಪುತ್ತಿಗೆ ಶ್ರೀಗಳ ವಿರುದ್ದ ತಿರುಗಿಬಿದ್ದ ಪೇಜಾವರ ಶ್ರೀಗಳು

ಪುತ್ತಿಗೆ ಶ್ರೀಗಳನ್ನು ಪರ್ಯಾಯಕ್ಕೆ ಆಹ್ವಾನಿಸದ ಬಗ್ಗೆ ನಾನು ತಟಸ್ಥ ನಿಲುವು ತಾಳಿಲ್ಲ. ವಿವಾದ ಬಗೆಹರಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಎಲ್ಲರೂ ನನ್ನ ವಿರುದ್ದ ಮಾತನಾಡುತ್ತಿರುವುದರಿಂದ ಮನಸಿಗೆ ಆಘಾತವಾಗಿದೆ. ನನ್ನ ಉಪವಾಸ ಯಾರ ವಿರುದ್ದವೂ ಅಲ್ಲ, ಯಾರ ಪರವಾಗಿಯೂ ಅಲ್ಲ. ನಾನು ಇಂದು ರಾತ್ರಿಯಿಂದ (ಜ 16) ಉಪವಾಸ ನಡೆಸಲು ನಿರ್ಧರಿಸಿದ್ದೇನೆ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಪುತ್ತಿಗೆ ಶ್ರೀಗಳು ಸರ್ವಜ್ಞ ಪೀಠವೇರಿದ ಸಂದರ್ಭದಲ್ಲಿ ಶ್ರೀಕೃಷ್ಣನನ್ನು ಮುಟ್ಟಿ ಪೂಜಿಸಬಾರದೆಂದು ಷರತ್ತು ವಿಧಿಸಲಾಗಿತ್ತು. ಅವರು ಅದರಂತೆ ನಡೆದಿದ್ದರೂ ಕೂಡಾ, ಆ ಸಮಯದಲ್ಲಿ ಕೃಷ್ಣನನ್ನು ಮುಟ್ಟಿ ಪೂಜೆ ಮಾಡುವುದಿಲ್ಲ ಎಂದು ಅಷ್ಟಮಠಗಳಲ್ಲಿ ಕೆಲ ಮಠಗಳು ಲಿಖಿತ ರೂಪದಲ್ಲಿ ಕೊಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಪುತ್ತಿಗೆ ಶ್ರೀಗಳು ಲಿಖಿತ ರೂಪದಲ್ಲಿ ಕೊಟ್ಟಿರಲಿಲ್ಲ. ಹೀಗಾಗಿ ಈ ಬಾರಿ ಪುತ್ತಿಗೆ ಶ್ರೀಗಳನ್ನು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸದ ಬಗ್ಗೆ ಅಷ್ಟ ಮಠಗಳಲ್ಲಿ ಏಕಾಭಿಪ್ರಾಯ ಮೂಡಿಸಲು ನನ್ನಿಂದ ಆಗುತ್ತಿಲ್ಲ ಎಂದು ಪೇಜಾವರ ಶ್ರೀಗಳು ಕೈಚೆಲ್ಲಿದ್ದಾರೆ.
ಸೋದೆ ಶ್ರೀಗಳ ಬಳಿ ನಾವು ಮಾತನಾಡಿದ್ದೇವೆ. ಪುತ್ತಿಗೆ ಶ್ರೀಗಳು ಉಪವಾಸ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ನಾನೂ ಕೂಡಾ ಸೋಮವಾರ ರಾತ್ರಿಯಿಂದ (ಜ 16) ಉಪವಾಸ ಕೈಗೊಳ್ಳುತ್ತೇನೆ ಎನ್ನುವ ಮೂಲಕ ಉಡುಪಿ ಪರ್ಯಾಯ ಆಮಂತ್ರಣಪತ್ರ ವಿವಾದ ಹೊಸ ತಿರುವು ಪಡೆದುಕೊಂಡಿದೆ.
ಇದೀಗ ಬಂದ ಸುದ್ದಿ: ಸೋದೆ ಮಠದ ಸಂಪೂರ್ಣ ಆಡಳಿತಾಧಿಕಾರದ ಚುಕ್ಕಾಣಿ ಶ್ರೀಗಳ ತಂದೆಯವರ ಕೈಯಲ್ಲಿದೆ. ಈಗ ಸೋದೆ ವಿಶ್ವವಲ್ಲಭ ಶ್ರೀಗಳ ತಂದೆಯವರ ಚಿಕ್ಕಮ್ಮ ದೈವಾಧೀನರಾದ ಹಿನ್ನಲೆಯಲ್ಲಿ ಶ್ರೀಗಳ ತಂದೆಯ ಕುಟುಂಬಕ್ಕೆ ಸೂತಕ ಇರುವುದರಿಂದ ಪರ್ಯಾಯ ಮಹೋತ್ಸವದ ಯಾವುದೇ ಚಟುವಟಿಕೆಗಳಲ್ಲಿ ಕುಟುಂಬ ಭಾಗವಹಿಸುವಂತಿಲ್ಲ. ಈ ಘಟನೆ ಸೋದೆಶ್ರೀಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. (ಸನ್ಯಾಸತ್ವ ಸ್ವೀಕರಿದ ನಂತರ ಯಾವುದೇ ಸಂಬಂಧಗಳು ಗಣನೆಗೆ ಬರುವುದಿಲ್ಲ, ಓದುಗರಿಗೆ ಬಿಡಿಸಿ ಹೇಳುವ ಸಲುವಾಗಿ ಈ ರೀತಿ ಬರೆಯಲಾಗಿದೆ)
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications