ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದ ಆಡಳಿತ ಆರೆಸ್ಸೆಸ್ ಕೈಯಲ್ಲಿ: ಸಂಸದ ವಿಶ್ವನಾಥ್
ಆರೆಸ್ಸೆಸ್ನವರು ರಾಜ್ಯದ ರಾಜಕೀಯ ಮತ್ತು ಆಡಳಿತವನ್ನು ನಿಯಂತ್ರಿಸುತ್ತಿದ್ದಾರೆ. ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಇವರು ಸಂವಿಧಾನ ಮೀರಿ ವರ್ತಿಸುತ್ತಿದ್ದಾರೆ. ಇವರು ಆಡಳಿತದ ಅಧೋಗತಿಯ ಸಂಕೇತ. ಯಾರದೋ ಉದ್ಯಮಿ ಮನೆಯಲ್ಲಿ ಸಂಘ ಪರಿವಾರದವರು ರಾಜ್ಯದ ನಾಯಕತ್ವವನ್ನು ತೀರ್ಮಾನಿಸುವುದು ನಮ್ಮ ಆಡಳಿತದ ದೌರ್ಬಲ್ಯಕ್ಷೆ ಸಾಕ್ಷಿ ಎಂದು ವಿಶ್ವನಾಥ್ ಕಿಡಿಕಾರಿದರು.
ಆರೆಸ್ಸೆಸ್ನವರು ಉಗ್ರಗಾಮಿಗಳು: ಆರೆಸ್ಸೆಸ್ನವರು ಯಾರದೋ ಹೆಸರಿನಲ್ಲಿ ದುಷ್ಕೃತ್ಯ ನಡೆಸಿ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಪಾಕ್ ಧ್ವಜ ಹಾರಿಸಿ, ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುತ್ತಾರೆ. ಇವರು ನಿಜಕ್ಕೂ ಉಗ್ರಗಾಮಿಗಳು. ಇಂಥವರು ರಾಜ್ಯದ ಆಡಳಿತವನ್ನು ನಿಯಂತ್ರಿಸುತ್ತಿರುವುದು ದುರಾದೃಷ್ಟಕರ ಎಂದು ವಿಶ್ವನಾಥ್ ಹೇಳಿದ್ದಾರೆ.
Comments
ಎಚ್ ವಿಶ್ವನಾಥ್ ಪ್ರಜಾಪ್ರಭುತ್ವ ಆರೆಸ್ಸೆಸ್ ದಲಿತರು ಮೈಸೂರು ಜಿಲ್ಲಾಸುದ್ದಿ ಭ್ರಷ್ಟಾಚಾರ ವಿವಾದ ಪ್ರತಿಭಟನೆ h vishwanath protest district news
English summary
Congress MP from Mysore H Vishwanath has said that RSS is ruling Karnataka. The state administration is in RSS hands he said.
Story first published: Friday, January 13, 2012, 7:46 [IST]