ನೀರಿನ ಟ್ಯಾಂಕಿಗೆ ಬಿದ್ದು 9 ವರ್ಷದ ಬಾಲಕ ಸಾವು

ಹೊಸಕೋಟೆಯ ಭಕ್ತರಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತೊಯ ವಿದ್ಯಾರ್ಥಿ ಸತೀಶ್ ದುರ್ಮರಣಕ್ಕೀಡಾದ ಬಾಲಕ. ದುರ್ದೈವಿ ಬಾಲಕ ಸತೀಶ್ ಸಂಪ್ ನಿಂದ ನೀರು ತೆಗೆಯಲು ಹೋದಾಗ ಕಾಲು ಜಾರಿ ಸಂಪಿನೊಳಕ್ಕೆ ಬಿದ್ದು ಅಸುನೀಗಿದ್ದಾನೆ.
ಸಂಪ್ ಹೆಚ್ಚು ಆಳವಾಗಿದ್ದು ಸಂಪೂರ್ಣವಾಗಿ ನೀರಿನಿಂದ ಭರ್ತಿಯಾಗಿತ್ತು. ನೀರಿನಲ್ಲಿ ಬಿದ್ದ ಬಾಲಕ ಉಸಿರುಗಟ್ಟಿ ಅಸುನೀಗಿದ್ದಾನೆ ಎಂದು ಹೊಸಕೋಟೆ ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ಮೃತದೇಹವನ್ನು ಸಂಪಿನಿಂದ ಹೊರತೆಗೆಯಲಾಗಿದೆ.











Click it and Unblock the Notifications