ತೀರ್ಥಹಳ್ಳಿ-ಕುಂದಾಪುರ ಬಾಳೆಬರೆ ಘಾಟ್ ಸಂಚಾರ ಬದಲು

Balebare Ghat Diversion
ಉಡುಪಿ, ಜ.5: ಕುಂದಾಪುರ ತಾಲೂಕಿನ ಬಾಳೆಬರೆ ಘಾಟ್ ರಸ್ತೆ (ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52) ಕಾಂಕ್ರೀಟ್ ಕಾಮಗಾರಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಮೂರು ತಿಂಗಳು ಸಂಚಾರ ನಿಷೇಧಿಸಲಾಗಿದೆ.

ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಜ.3ರಿಂದ ಮಾರ್ಚ್ 31ರವರೆಗೆ ಅಥವಾ ಕಾಮಗಾರಿ ಮುಕ್ತಾಯ ಗೊಳ್ಳುವವರೆಗೆ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಸೂಚಿಸಲಾಗಿದೆ ಎಂದು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲಾಡಳಿತ ಹೇಳಿದೆ.

ಬದಲಿ ವ್ಯವಸ್ಥೆ: ಕುಂದಾಪುರದಿಂದ - ಶಿವಮೊಗ್ಗಕ್ಕೆ ಹೋಗುವ ವಾಹನಗಳು
ಕುಂದಾಪುರದಿಂದ ಕೊಲ್ಲೂರಿಗೆ ಹೋಗಿ ನಾಗೋಡಿ ಘಾಟ್ ರಸ್ತೆಯ ಮೂಲಕ ಹೊಸನಗರ- ರಿಪ್ಪನ್‌ಪೇಟೆ ಮಾರ್ಗವಾಗಿ ಶಿವಮೊಗ್ಗ ತಲುಪಬಹುದು.

ಇನ್ನೊಂದು ಮಾರ್ಗ: ಕೊಲ್ಲೂರು ಮಾರ್ಗವಾಗಿ ಹೋಗಿ ನಾಗೋಡಿ ಘಾಟಿ ರಸ್ತೆಯ ಮೂಲಕ ನಗರ, ಮಾಸ್ತಿಕಟ್ಟೆ-ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗ ತಲುಪಬಹುದು.

ಕುಂದಾಪುರ - ಶಿವಮೊಗ್ಗಕ್ಕೆ ಹೋಗುವ ಲಘು ವಾಹನಗಳು - ಹಾಲಾಡಿ - ಸೊಮೇಶ್ವರ ಮಾರ್ಗವಾಗಿ, ಆಗುಂಬೆ ಘಾಟ್ ಮೂಲಕ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಬಹುದು.

ಉಡುಪಿಯಿಂದ-ಶಿವಮೊಗ್ಗಕ್ಕೆ ಹೋಗುವ ಲಘುವಾಹನಗಳು ಉಡುಪಿಯಿಂದ - ಹೆಬ್ರಿ -ಸೋಮೇಶ್ವರ ಮಾರ್ಗವಾಗಿ ಆಗುಂಬೆ ಘಾಟ್ ಅನುಸರಿಸಬಹುದು.
ಶಿವಮೊಗ್ಗ ಹೋಗುವ ಘನ ವಾಹನಗಳು ಉಡುಪಿಯಿಂದ- ಕಾರ್ಕಳ ಮಾರ್ಗವಾಗಿ ಕೆರೆಕಟ್ಟೆ-ಶೃಂಗೇರಿ-ಬೇಗಾರು, ಬಿದ್ರಗೋಡು ಆಗುಂಬೆ- ತೀರ್ಥಹಳ್ಳಿ ಮುಖಾಂತರ ಶಿವಮೊಗ್ಗ ತಲುಪಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+