ಚಿಕ್ಕಮಗಳೂರಲ್ಲಿ ಭಗ್ನಪ್ರೇಮಿಯಿಂದ ಪ್ರಿಯತಮೆಯ ಹತ್ಯೆ

Gruesome incident in Chikmagalur
ಚಿಕ್ಕಮಗಳೂರು, ಡಿ. 31 : ಹೊಸವರ್ಷದ ಮುನ್ನಾದಿನವೇ ರಕ್ತದೋಕುಳಿ ಹರಿದಿದೆ. ಮನದನ್ನೆ ಪ್ರೀತಿಯ ನಿವೇದನೆಯನ್ನು ನಿರಾಕರಿಸಿದ್ದಕ್ಕೆ ಬೇಸತ್ತ ಭಗ್ನಪ್ರೇಮಿ ಯುವಕನೊಬ್ಬ ಹಾಡುಹಗಲೆ ನಲ್ಲೆಯ ಕತ್ತಿಗೆ ಚಾಕು ಹಾಕಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ಶನಿವಾರ ಸಂಜೆ ನಡೆದಿದೆ.

ನಗರದ ತಾಲೂಕು ಕಚೇರಿಯ ಅಕ್ಷರ ದಾಸೋಹ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ನಯನಾ ಎಂಬ 22 ವರ್ಷದ ಯುವತಿಯೇ ಹತ್ಯೆಗೀಡಾದವಳು. ಕತ್ತು ಸೀಳಿದ ಸುಬ್ರಮಣ್ಯ ಪರಾರಿಯಾಗಿದ್ದಾನೆ. ಹೊಸ ವರ್ಷದ ಮುನ್ನಾದಿನ ಚಿಕ್ಕಮಗಳೂರಿನಲ್ಲಿ ಈ ಘಟನೆ ಕಪ್ಪುಛಾಯೆಯನ್ನು ಮೂಡಿಸಿದೆ.

ದಂಟರಮಕ್ಕಿ ನಿವಾಸಿಯಾಗಿರುವ ಸುಬ್ರಮಣ್ಯ ಅನೇಕ ವರ್ಷಗಳಿಂದ ನಯನಾಳನ್ನು ಪ್ರೇಮಿಸುತ್ತಿದ್ದ. ಆದರೆ, ಆಕೆ ಪ್ರೇಮವನ್ನು ನಿರಾಕರಿಸುತ್ತಿದ್ದಲೇ ಬಂದಿದ್ದಳು. ನಯನಾಳ ತಿರಸ್ಕಾರದಿಂದ ರೊಚ್ಚಿಗೆದ್ದ ಸುಬ್ರಮಣ್ಯ ಇಂದು ನಯನಾ ಕೆಲಸ ಮಾಡುತ್ತಿದ್ದ ಕಚೇರಿಗೆ ಬಂದು, ನಯನಾ ಕೆಲಸ ಮುಗಿಸಿ ಹೊರಬರುತ್ತಿದ್ದಂತೆ ಚೂರಿಯಿಂದ ಕತ್ತು ಕತ್ತರಿಸಿಹಾಕಿದ್ದಾನೆ.

ಈ ಘಟನೆ ನಡೆದಾಗ ದಾರಿಹೋಕರು ಆಕೆ ರಕ್ಷಣೆಗೆ ಬರಲಿಲ್ಲ ಮತ್ತು ಸುಬ್ರಮಣ್ಯನನ್ನು ಹಿಡಿಯಲು ಯತ್ನಿಸಲಿಲ್ಲ. ಎಲ್ಲರು ಸ್ತಂಭೀಭೂತರಾದಂತೆ ನಿಂತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ನಯನಾಳನ್ನು ಕೂಡಲೆ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿಯಲ್ಲಿಯೇ ಆಕೆ ಕೊನೆಯುಸಿರೆಳೆದಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+