ಯಡಿಯೂರಪ್ಪಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಲ್ಲ

ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದೇ ಹೇಳುತ್ತ ಬಂದಿರುವ ಯಡಿಯೂರಪ್ಪ, ಮತ್ತೆ ಏಕವ್ಯಕ್ತಿ ನಾಯಕತ್ವದ ಚರ್ಚೆಯನ್ನು ಆರಂಭಿಸಿರುವುದು ಅವರನ್ನು ಬಲ್ಲವರಿಗೆ ಅಚ್ಚರಿಯನ್ನೂ ತರುವುದಿಲ್ಲ. ಈ ಕುರಿತಾಗಿ ಹೈಕಮಾಂಡಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ದಾವಣಗೆರೆಯಲ್ಲಿ ಶುಕ್ರವಾರ ಹೇಳಿದರು.
ಶ್ರೀರಾಮುಲು ಬಿಜೆಪಿಗೆ ಬರಲಿ : ಹೊಸ ಪಕ್ಷ ಕಟ್ಟಲು ತಯಾರಿ ನಡೆಸಿರುವ ಶ್ರೀರಾಮುಲುವನ್ನು ಮತ್ತೆ ಬಿಜೆಪಿಗೆ ವಾಪಸ್ ತರುವ ಪ್ರಾಮಾಣಿಕ ಪ್ರಯತ್ನ ಬಿಜೆಪಿ ಮಾಡಬೇಕು. ನಾನು ಶ್ರೀರಾಮುಲು ಜೊತೆಗೆ ಸತತವಾಗಿ ಸಂಪರ್ಕದಲ್ಲಿದ್ದೇನೆ. ಅವರು ವಾಪಸ್ ಬರುತ್ತಾರೆ ಎಂಬ ಭರವಸೆಯೂ ಇದೆ ಎಂದು ಯಡಿಯೂರಪ್ಪ ನುಡಿದರು.
ದೆಹಲಿಯಲ್ಲಿ ಡಿವಿಎಸ್ : ಈ ನಡುವೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ದೆಹಲಿಗೆ ತೆರಳಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದರು. ವಾಜಪೇಯಿ ಅವರ ನಿವಾಸಕ್ಕೂ ತೆರಳಿರುವ ಅವರು, ಮಾಜಿ ಪ್ರಧಾನಿಯ ಉಭಯ ಕುಶಲೋಪರಿ ವಿಚಾರಿಸಿದರು.












Click it and Unblock the Notifications