ಲೋಕಪೀಠ: ಕಾಂಗ್ರೆಸ್ಸನ್ನು ಬುಟ್ಟಿಗೆ ಹಾಕಿಕೊಳ್ಳುವ ಬಿಜೆಪಿ ತಂತ್ರ

ಜಾತಿಯ ಹಿತದೃಷ್ಟಿಯಿಂದ ಬನ್ನೂರುಮಠ ನೇಮಕಕ್ಕೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಅಸ್ತು ಎಂದಿರಲಿಲ್ಲ. ಆದರೆ ಲಿಂಗಾಯತ ಸಮುದಾಯದ ಅಧಿನಾಯಕನಂತೆ ರಾರಾಜಿಸುತ್ತಿರುವ ಯಡಿಯೂರಪ್ಪ ಅವರು ಬನ್ನೂರುಮಠ ಹೆಸರನ್ನೇ ಲೋಕಾಯುಕ್ತ ಪೀಠಕ್ಕೆ ಸೂಚಿಸಿದ್ದರು. ಯಡಿಯೂರಪ್ಪ ನಿರ್ದೇಶಿತ ಮುಖ್ಯಮಂತ್ರಿ ಸದಾನಂದರಿಗೂ ಬನ್ನೂರುಮಠ ಅವರ ಮೇಲೆ ಹೆಚ್ಚು ಒಲವಿತ್ತು.
ಬಲಿಪೀಠ: ಆದರೆ ಮೂರು ತಿಂಗಳ ಈ ಹಗ್ಗಜಗ್ಗಾಟಕ್ಕೆ ಮೇಲ್ಮನೆ ಚುನಾವಣೆ ಹೇತುವಾಗಿದ್ದು, ಮಾಗಿಯ ಚಳಿಯಲ್ಲೂ ice-breaking ಆಗಿದೆ ಅನ್ನಿಸುತ್ತಿದೆ. ಹಾಗೆ ನೋಡಿದರೆ, ಆರಂಭದಲ್ಲೇ ಬನ್ನೂರುಮಠ ನೇಮಕಕ್ಕೆ ಕಾಂಗ್ರೆಸ್ ಕೊಂಕು ತೆಗೆದಿತ್ತು. ಲಿಂಗಾಯತ ಸಮುದಾಯವನ್ನು ಓಲೈಸುವ ಯಡಿಯೂರಪ್ಪ ತಂತ್ರಕ್ಕೆ ಮಣೆಹಾಕದಿರಲು ಕಾಂಗ್ರೆಸ್ ಪಟ್ಟುಹಿಡಿದಿತ್ತು.
ಆದರೆ ಈಗ ಚುನಾವಣೆ ಸಮಯ... ಸ್ವತಃ ಸದಾನಂದ ಗೌಡರೇ ಅವಿರೋಧವಾಗಿ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಉಮೇದಿಗೆ ಬಿದ್ದಿದ್ದಾರೆ. ಈಗಾಗಲೇ ಬಹುತೇಕ ಯಶಸ್ವಿಯೂ ಆಗಿದ್ದಾರೆ. ಆದರೆ ಒಂದು ಕಾಂಗ್ರೆಸ್ ಪಕ್ಷ ಮಾತ್ರ ತೊಡರುಗಾಲು ಹಾಕುತ್ತಿದ್ದಂತೆ ಅದನ್ನು ಸಂಭಾಳಿಸುವ ನಿಟ್ಟಿನಲ್ಲಿ ಇದೀಗ ಸದಾನಂದ ಗೌಡರು ಬನ್ನೂರುಮಠಗೆ ಕೈಕೊಟ್ಟು ಹಸ್ತದತ್ತ ಕೈಚಾಚಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ರಿಂಗಣಿಸುತ್ತಿದೆ.
ಚುನಾವಣೆ ಕಾಲೇ ಕಾಂಗ್ರಸ್ಸನ್ನು ಸಂತೃಪ್ತಗೊಳಿಸಿದರೆ ತಮ್ಮ ಆಯ್ಕೆ ಸಲೀಸು ಎಂದೆಣಿಸಿರುವ ಗೌಡರು ಇದೀಗ ಲೋಕಾಯುಕ್ತ ದಾಳವನ್ನು ಉರುಳಿಸಿದ್ದಾರೆ. ಗೌಡರು ಯಶಸ್ವಿಯಾಗುತ್ತಾರಾ? ವಿಫಲವಾದರೆ ಬನ್ನೂರುಮಠ ಕಾರ್ಡನ್ನು ಮತ್ತೆ ಝಳಪಿಸುವ ಸದವಕಾಶ ಬಳಸಿಕೊಂಡರಾಯಿತು ಎಂಬ ಲೆಕ್ಕಾಚಾರವೂ ಇದೆ.
ಎಲ್ಲವೂ ಬಿಜೆಪಿ ಲೆಕ್ಕಾಚಾರದಂತೆ ನಡೆದರೆ ನಿಷ್ಕಳಂಕ (ನಿಜಕ್ಕೂ ಇದು ನಮ್ಮ ದೌರ್ಭಾಗ್ಯ. ಇನ್ನಾದರೂ ಈ ಪದ ಬಳಕೆ ನಿಲ್ಲಲಿ ಎಂಬ ಆಶಯವಿದೆ) ನ್ಯಾ. ಎನ್ ಕೆ ಸೋಧಿ ಅವರು ಈ ವಾರಾಂತ್ಯವೇ ಲೋಕಾಯುಕ್ತ ಪೀಠಕ್ಕೆ ಏರುವುದನ್ನು ನೋಡಿ ಕರ್ನಾಟಕದ ಜನತೆ ಸಂಭ್ರಮಿಸಬಹುದು.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications