Get Updates
Get notified of breaking news, exclusive insights, and must-see stories!

ರಾಜಭವನ ನಿಮ್ಮದು, ನಾನು ಯಾತ್ರಿಕ: ಹಂಸರಾಜ್

Governor Hansraj Bhardwaj PresentsT.S. Satyan Memorial Awards
ಬೆಂಗಳೂರು, ಡಿ 18: "ನಾನು ಪತ್ರಕರ್ತನೂ ಅಲ್ಲ, ಛಾಯಾ ಗ್ರಾಹಕನೂ ಅಲ್ಲ. ಆದರೆ ಪತ್ರಿಕೆಗಳಲ್ಲಿ ಬರುವ ಅತ್ಯುತ್ತಮವಾದದ್ದನ್ನು ಓದುವುದು ಮತ್ತು ಆನಂದಿಸುವುದು ನನಗೆ ಸದಾ ಖುಷಿ ತರುವ ವಿಚಾರ" ಎಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಹೇಳಿದ್ದಾರೆ.

ಅವರು ರಾಜಭವನದಲ್ಲಿ ಟಿಎಸ್ ಸತ್ಯನ್ ಸ್ಮಾರಕ ಪ್ರಶಸ್ತಿಗಳನ್ನು ಭಾನುವಾರ ವಿತರಿಸಿ ಮಾತನಾಡುತ್ತಿದ್ದರು. "A Thing of Beauty is a Joy Forever" ಎಂದು ಜಾನ್ ಕೀಟ್ಸ್ ಮಾತನ್ನು ಉಲ್ಲೇಖಿಸಿ ಮಾತನಾಡಿದ ಹಂಸರಾಜ್ ಭಾರಧ್ವಾಜ್ "ಪತ್ರಿಕೆಗಳಲ್ಲಿ ಅತ್ಯುತ್ತಮವಾದದ್ದನ್ನು ಓದಲು ಯಾವತ್ತೂ ಸಂತೋಷ ಪಡುತ್ತೇನೆ" ಎಂದರು.

"ರಾಜ್ಯಪಾಲರು ಮಾಧ್ಯಮಗಳಿಗೆ ಮುಕ್ತವಾಗಿ ಮಾತನಾಡಬಾರದು ಎನ್ನುವುದರಲ್ಲಿ ನನಗೆ ನಂಬಿಕೆಯಿಲ್ಲ. ಈಗ ಕಾಲ ಬದಲಾಗಿದೆ, ಎಲ್ಲಾ ಸಾಮಾಜಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಆಶೆ ನನಗಿದೆ" ಎಂದರು. "ರಾಜ್ಯದ ರಾಜಭವನದ ಬಾಗಿಲು ಗೌರವಾನ್ವಿತ ಪ್ರಜೆಗಳಿಗೆ ಯಾವಾಗಲೂ ಮುಕ್ತವಾಗಿರುತ್ತವೆ" ಎಂದು ಹೇಳಿದ ಭಾರಧ್ವಾಜ್ "ನಾನು ಇಲ್ಲಿ ಶಾಶ್ವತವಾಗಿರುವುದಿಲ್ಲ, ಈ ರಾಜಭವನ ನಿಮ್ಮದು" ಎಂದರು.

ಪ್ರಶಸ್ತಿ ಪಡೆದವರ ಪ್ರೊಫೈಲ್ ನೋಡಿಬಿಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+