ಬಿಜೆಪಿಗೆ ಟಾಂಗ್ ಕೊಟ್ಟು ತಮಾಷೆನೋಡುವ ರಾಮುಲು

sreeramulu-doesnt-want-dislodge-govt-but-bjp
ಬೆಂಗಳೂರು, ಡಿ.11: ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಳ್ಳಾರಿ ವೀರ ಶ್ರೀರಾಮುಲು ಒಂದೇ ಸಮನೆ ಪಕ್ಷದ ಹಾಲಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ಮೇಲೆ ಮುರುಕೊಂಡು ಬಿದ್ದಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯನ್ನು ಅನಾಯಾಸವಾಗಿ ಗೆದ್ದುಕೊಂಡು ಈಗಾಗಲೇ ಒಂದು ಹೊಡೆತ ಕೊಟ್ಟಿರುವ ರಾಮುಲು ಈಗ ಮೇಲ್ಮನೆ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮ ತಾಕತ್ತು ಪ್ರದರ್ಶಿಸುವ ಇರಾದೆ ಹೊಂದಿದ್ದಾರೆ.

ಆದರೆ ಇದು ಬಿಜೆಪಿಗೆ ಟಾಂಗ್ ಕೊಟ್ಟು ಸುಮ್ಮನಾಗುವ ರಾಜಕೀಯ ಲೆಕ್ಕಾಚಾರವಾಗಿದೆ. ವಾಸ್ತವವಾಗಿ ಸಂಸದ ಸದಾನಂದಗೌಡರ ಆಯ್ಕೆಗಾಗಿಯೇ ಮೇಲ್ಮನೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸದಾನಂದರನ್ನು ಸೋಲಿಸುವ ಗುರಿಯೊಂದಿಗೆ ರಾಮುಲು ಅವರ ರೋಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರತಿಪಕ್ಷಗಳೂ ಅವರೊಂದಿಗೆ ಕೈಜೋಡಿಸಿವೆ.

ಗಮನಾರ್ಹವೆಂದರೆ ಸದಾನಂದ ಗೌಡರು ಸೋತರೆ ಅದು ಪಕ್ಷಕ್ಕೆ ಮುಖಭಂಗವಾಗಲಿದೆಯೇ ಹೊರತು ಸರಕಾರದ ಅಸ್ತಿತ್ವಕ್ಕೇನೂ ಧಕ್ಕೆಯೊದಗದು. ಹಾಗೆಂದೇ ನಿಮಿತ್ತ ಮಾತ್ರಕ್ಕೆ ಸದಾನಂದರನ್ನು ಸೋಲಿಸಿ, ತನ್ನ ಶಕ್ತಿ ಪ್ರದರ್ಶಿಸುವುದು ಪ್ರತಿಪಕ್ಷಗಳ ಮಂತ್ರಾಲೋಚನೆಯಾಗಿದೆ.

ಉಲ್ಲೇಖಾರ್ಹ ಅಂಶವೆಂದರೆ 22-25 ಶಾಸಕರೊಂದಿಗೆ ಸರಕಾರ ಉರುಳಿಸುವ ಸಾಹಸಕ್ಕೆ ರಾಮುಲು ಕೈಹಾಕಿದರೆ ಅದು ಅವರಿಗೇ ಮುಳುವಾಗಲಿದೆ. ಸರಕಾರ ಉರುಳಿ ಮಧ್ಯಂತರ ಚುನಾವಣೆ ಏರ್ಪಟ್ಟರೆ ಬಿಜೆಪಿಗೆ ಪಾಲಿಗೆ ಅನುಕಂಪದ ಹವಾ ಕೆಲಸ ಮಾಡಲಿದೆ. ಆದ್ದರಿಂದ ಸದ್ಯಕ್ಕೆ ಯಾವುದೇ ಪಕ್ಷವೂ ಚುನಾವಣೆಗೆ ಹೋಗುವ ಮನಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಬಿಜೆಪಿಗೆ ಟಾಂಗ್ ಕೊಟ್ಟು ಸುಮ್ಮನಾಗುವ ಲೆಕ್ಕಾಚಾರ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+