ನಾನು ಸತ್ಯಹರಿಶ್ಚಂದ್ರ ಅಲ್ಲ: ಶ್ರೀರಾಮುಲುಗೆ ಜ್ಞಾನೋದಯ

ಆದರೆ ಯಾಕೋ, ಏನೋ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಮಾತ್ರ ರಾಮುಲುಗೆ ಬೇಡವಾದ ವ್ಯಕ್ತಿಯಾಗಿದ್ದಾರೆ. ಈಶ್ವರಪ್ಪ ತಮಗಷ್ಟೇ ಅಲ್ಲ ಬಿಜೆಪಿಯಲ್ಲೂ ಯಾರಿಗೂ ಬೇಡವಾದ ವ್ಯಕ್ತಿಯಾಗಿದ್ದು, ಜಗಳಗಂಟ ರಾಜಕಾರಣಿ ಎಂದು ಶ್ರೀರಾಮುಲು ಟೀಕಿಸಿದ್ದಾರೆ.
ಈಶ್ವರಪ್ಪ ಪ್ರತಿಪಕ್ಷದ ನಾಯಕರಂತೆ ವರ್ತಿಸುವ ಮೂಲಕ ವಿಧಾನಸಭೆ ಅಧಿವೇಶನದ ಸಮಯವನ್ನು ಹಾಳು ಮಾಡುತ್ತಿದ್ದಾರೆ, ಅವರ ಬಗ್ಗೆ ಮಾತನಾಡಿದರೆ ಕೆಸರಿನ ಮೇಲೆ ಕಲ್ಲೆಸೆದು ಮುಖಕ್ಕೆ ಎರಚಿಕೊಂಡಂತೆ ಎಂದು ರಾಮುಲು ವ್ಯಂಗ್ಯವಾಡಿದರು.
ಆಂಧ್ರದ ವೈಎಸ್ಆರ್ ಕಾಂಗ್ರೆಸ್ ಮಾದರಿಯ ಪಕ್ಷವನ್ನು ರಾಜ್ಯದಲ್ಲಿ ಹುಟ್ಟು ಹಾಕಲಿದ್ದೇನೆ. ಅಧಿವೇಶನ ಮುಗಿದ ಬಳಿಕ ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುವುದಾಗಿ ರಾಮುಲು ಇದೇ ವೇಳೆ ಹೇಳಿದರು.












Click it and Unblock the Notifications