'ಮುಂಗಾರು ಮಳೆ' ಕೃಷ್ಣಪ್ಪ ವಿರುದ್ಧವೂ ಬಿತ್ತು ಭೂ ಕೇಸು

lokayukta-land-case-mungaru-male-e-krishnappa
ಬೆಂಗಳೂರು, ಡಿ.9: 'ಮುಂಗಾರು ಮಳೆ'ಯ ನಿರ್ಮಾಪಕ, ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ ವಿರುದ್ಧವೂ ಲೋಕಾಯುಕ್ತ ಕೋರ್ಟಿನಲ್ಲಿ ಗುರುವಾರ ಭೂ ಕೇಸು ದಾಖಲು ಮಾಡಲಾಗಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ, ನಿವೇಶನದಾರನ್ನು ತೆರವುಗೊಳಿಸಲು ಬೆದರಿಕೆ ಒಡ್ಡುತ್ತಿರುವ ಆರೋಪ ಇವರ ಮೇಲಿದೆ.

ಯಲಹಂಕದ ಬಳಿಯ ದಾಸನಪುರ ಹೋಬಳಿಯ ದೊಂಬರಹಳ್ಳಿಯಲ್ಲಿನ 5.36 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಭೂಮಾಲೀಕರಾದ ವೆಂಕಟಾಚಲಂ ಸೇರಿದಂತೆ 9 ಮಂದಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ.

ಭೂ ಸಾರವೇನು: 'ವಿವಾದಿತ ಸದರಿ ಜಮೀನಿಗೆ ಮುದ್ದುವೀರಪ್ಪ ಮೂಲ ಮಾಲೀಕರು. ಸುಂದರಂ ಎನ್ನುವವರನ್ನು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಮಾಡಿದ್ದ ಅವರು, ಈ ಜಮೀನನ್ನು ಅಭಿವೃದ್ಧಿ ಪಡಿಸಿ ನಿವೇಶನವನ್ನಾಗಿ ಮಾಡುವಂತೆ ತಿಳಿಸಿದ್ದರು. ಅದರಂತೆ ನಿವೇಶನ ತಯಾರಾದಾಗ, 1992ರಲ್ಲಿ ಸುಮಾರು 130 ಕುಟುಂಬಕ್ಕೆ ಅದನ್ನು ಹಂಚಿಕೆ ಮಾಡಲಾಯಿತು. ಅಲ್ಲಿ ಕೆಲವರು ಮನೆ ಕಟ್ಟಿಕೊಂಡು 10 ವರ್ಷದಿಂದ ವಾಸವಾಗಿದ್ದಾರೆ.

ಮುದ್ದುವೀರಪ್ಪ ತೀರಿಕೊಂಡ ಮೇಲೆ, ಅವರ ಪತ್ನಿ ಹಾಗೂ ಮಕ್ಕಳು ಈ ಜಮೀನನ್ನು ಮಾರಾಟ ಮಾಡಲು ತಯಾರಿ ನಡೆಸಿದರು. ಇದನ್ನು ಅಲ್ಲಿ ವಾಸವಾಗಿದ್ದವರು ಸಿವಿಲ್ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತು.

ಈ ಮಧ್ಯೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೃಷ್ಣಪ್ಪನವರು 2009ರಲ್ಲಿ ಒತ್ತಾಯ ಪೂರ್ವಕವಾಗಿ ಈ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈಗ ಮಾಲೀಕರನ್ನು ತೆರವುಗೊಳಿಸಲು ಅವರು ಪ್ರಯತ್ನಿಸಿದ್ದು, ಈ ಸಂಬಂಧ ಬೆದರಿಕೆ ಹಾಕುತ್ತಿದ್ದಾರೆ. ಕೋರ್ಟ್‌ನಿಂದ ಯಥಾಸ್ಥಿತಿಯ ಆದೇಶ ಇದ್ದರೂ ಕಾಂಪೌಂಡ್‌ಗಳನ್ನು ಅವರು ಕೆಡವಿದ್ದಾರೆ ಎಂದು ದೂರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+