ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧರ್ಮ-ಕೃಷ್ಣ-ಸ್ವಾಮಿ ವಿರುದ್ಧ FIR ದಾಖಲೆ
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 156(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಎಡಿಜಿಪಿ ಸೂರ್ಯನಾರಾಯಣ ರಾವ್ ಅವರ ನೇತೃತ್ವದ ತಂಡ ತನಿಖೆ ಆರಂಭಿಸಿದೆ.
ಮೂವರು ಮಾಜಿ ಮುಖ್ಯಮಂತ್ರಿಗಳ ಜೊತೆಗೆ 8 ಅಧಿಕಾರಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜನವರಿ 6ರೊಳಗೆ ತನಿಖಾ ವರದಿಯನ್ನು ನ್ಯಾ.ಎನ್ ಕೆ ಸುಧೀಂದ್ರ ರಾವ್ ಅವರಿಗೆ ಸಲ್ಲಿಸಬೇಕಾಗುತ್ತದೆ.
ಮೂವರು ಮಾಜಿ ಸಿಎಂಗಳ ಅಧಿಕಾರ ಅವಧಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಟಿಜೆ ಅಬ್ರಹಾಂ ಎಂಬುವವರು ಖಾಸಗಿ ದೂರು ಸಲ್ಲಿಸಿದ್ದರು. ಅವರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ತನಿಖೆಗೆ ನ್ಯಾ. ಸುಧೀಂದ್ರರಾವ್ ಅವರು ಆದೇಶಿಸಿದ್ದರು.
ಬಂಧನ ಸಾಧ್ಯತೆ?: ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳು ಹಾಗೂ ಮೂವರು ಮಾಜಿ ಸಿಎಂ ಅವರನ್ನು ಬಂಧನಕ್ಕೆ ಒಳಪಡಿಸಿ ವಿಚಾರಣೆ ನಡೆಸುವ ಅವಕಾಶ ಲೋಕಾಯುಕ್ತ ಪೊಲೀಸರಿಗೆ ಇದೆ.
Comments
ಅಕ್ರಮ ಗಣಿಗಾರಿಕೆ ಎಸ್ಎಂ ಕೃಷ್ಣ ಲೋಕಾಯುಕ್ತ illegal mining sm krishna dharam singh hd kumaraswamy lokayukta
English summary
Lokayukta police filed an FIR against external affairs minister SM Krishna (UPA) and two former Karnataka chief ministers N Dharam Singh (Congress) and HD Kumaraswamy (Janata Dal-Secular) and in the illegal mining scam.
Story first published: Friday, December 9, 2011, 5:55 [IST]