ಅಸೆಂಬ್ಲಿಗೆ ಕುಮಾರಣ್ಣ ಸ್ಪರ್ಧೆ, ಬಿಜೆಪಿ ಭಯ ಜೆಡಿಎಸ್ ಗಿಲ್ಲ

ನಗರದ ಹೊರ ವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿ ಸೋಮವಾರ ಸಂಜೆ ಜೆಡಿಎಸ್ ಶಾಸಕರ ಮಹತ್ವದ ಸಭೆ ನಡೆದಿತ್ತು.ಆದರೆ, ಇದು ಪಕ್ಷವನ್ನು ಸದೃಢಗೊಳಿಸಲು ನಡೆಸಿದ ಪೂರ್ವಭಾವಿ ಸಭೆ, ಬಿಜೆಪಿಯ ಆಪರೇಷನ್ ಕಮಲಕ್ಕೆ ಹೆದರಿ ಸಭೆ ನಡೆಸುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
ಶ್ರೀರಾಮುಲುಗೆ ಬೆಂಬಲ ಏಕೆ?: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿ ಶ್ರೀರಾಮುಲುರನ್ನು ವ್ಯಕ್ತಿಗತವಾಗಿ ಬೆಂಬಲಿಸಬೇಕಾದ ಪ್ರಸಂಗ ಒದಗಿಬಂದಿತು. ಶ್ರೀರಾಮುಲುರನ್ನು ಜೆಡಿಎಸ್ಗೆ ಸೇರ್ಪಡೆಗೊಳಿಸುವ ಸಂಬಂಧ ಯಾವುದೇ ಚರ್ಚೆ ನಡೆಸಿಲ್ಲ. ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಎಚ್ಡಿಕೆ ಹೇಳಿದರು.
ಅಸೆಂಬ್ಲಿಗೆ ಕುಮಾರಣ್ಣ?: ಡಿವಿ ಸದಾನಂದ ಗೌಡರ ಸರ್ಕಾರದಲ್ಲಿ ಅಸ್ಥಿರತೆ ತಾಂಡವವಾಡುತ್ತಿದೆ. ಯಾವುದೇ ಸಂದರ್ಭದಲ್ಲಿ ಸರ್ಕಾರ ತಾನಾಗೇ ಕೆಳಗೆ ಬೀಳಲಿದೆ. ವಿಧಾನಸಭೆಗೆ ಚುನಾವಣೆ ಎದುರಾದರೆ ನಾನು ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ಕುಮಾರಸ್ವಾಮಿ ಅವರು ಪ್ರಕಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.












Click it and Unblock the Notifications