ಬಿಜೆಪಿಯಿಂದ ಶ್ರೀರಾಮುಲು ಬಂಟರ ಉಚ್ಛಾಟನೆ ಇಲ್ಲ

ರಾಮುಲು ದೊರೆತಿರುವ ಅಭೂತಪೂರ್ವ ಯಶಸ್ಸನ್ನು ನೋಡಿದರೆ ಅವರೊಬ್ಬ ಜನನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅನುಕಂಪವೋ, ಬಳ್ಳಾರಿಯ ವಾಸ್ತವವೋ ಅಂತೂ ರಾಮುಲು ಭರ್ಜರಿ ಯಶಸ್ಸು ಸಂಪಾದಿಸಿದ್ದಾರೆ. ರಾಮುಲು ಬಳಗದ ಶಾಸಕರು, ಸಂಸದರನ್ನು ಉಚ್ಛಾಟಿಸುವ ಕ್ರಮಕ್ಕೆ ಮುಂದಾದರೆ ಪಕ್ಷಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದನ್ನು ಬಿಜೆಪಿ ಈಗಾಗಲೇ ಮನಗಂಡಿದೆ.
ರಾಮುಲು ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗ ಅವರ ನಿಷ್ಠರನ್ನು ಉಚ್ಛಾಟಿಸಿದರೆ ಅವರೆಲ್ಲ ರಾಜೀನಾಮೆ ನೀಡಿ, ಮರು ಚುನಾವಣೆ ಜನಾದೇಶಕ್ಕೆ ಪಂಥಾಹ್ವಾನ ನೀಡುವುದು ಗ್ಯಾರಂಟಿ. ಅಂದರೆ ರಾಮುಲು ರಿಪೀಟ್ ಶೋ ಆಗುತ್ತದೆ. ಅಂದರೆ ರಾಮುಲು ಹಿಡಿತದಲ್ಲಿರುವ ಭಾಗಗಳಲ್ಲಿ ಪಕ್ಷ ನಿರ್ನಾಮವಾಗಲಿದೆ.
ಅಲ್ಲಿಗೆ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದು ಬೇಡ ಎಂಬುದು ಬಿಜೆಪಿ ಚಿಂತಕರ ಚಾವಡಿಯ ಚಿಂತನೆಯಾಗಿದೆ. ಅಷ್ಟಕ್ಕೂ ಪ್ರಸಕ್ತ ವಿಧಾನಸಭೆಯ ಕಾಲಾವಧಿ ಅಬ್ಬಬ್ಬಾ ಅಂದರೆ ಇನ್ನೊಂದು ವರ್ಷ. ಅಂತಹುದರಲ್ಲಿ ಮತ್ತೆ ಮತ್ತೆ ಚುನಾವಣೆ ಬೇಡ ಎಂಬ ಲೆಕ್ಕಾಚಾರವೂ ಇದೆ.












Click it and Unblock the Notifications