ಎಚ್ಚರ, ಬಾಟಲಿಯಲ್ಲಿ ಎಚ್ಐವಿ ಸೋಂಕಾಣು: ಪೆಪ್ಸಿ ಕುಡಿಯಬೇಡಿ

ಕಂಪನಿಯ ಉದ್ಯೋಗಿಯೊಬ್ಬ ಎಚ್ಐವಿ ಪೀಡಿತನಾಗಿದ್ದು pepsi, tropicana juice, slice, 7up , coca cola ಮುಂತಾದ ಪಾನೀಯಗಳಲ್ಲಿ ತನ್ನ ಎಚ್ಐವಿ ಸೋಂಕಾಣು ಬೆರಸಿದ್ದಾನೆ. ಆದ್ದರಿಂದ ಎಚ್ಚರ, ಬಾಟಲಿಯಲ್ಲಿ ಎಚ್ಐವಿ ಸೋಂಕಾಣು ಇರುತ್ತದೆ. ಪೆಪ್ಸಿ ಕುಡಿಯಬೇಡಿ. ಹೆಚ್ಚಿನ ಮಾಹಿತಿಗಾಗಿ NDtv ವೀಕ್ಷಿಸಿ ಎಂಬುದು ಸಂದೇಶದ ಸಾರ.
ಆದರೆ ಪೆಪ್ಸಿ ಮಾರಾಟ ಕಂಪನಿ ಇಂತಹ ಆತಂಕವನ್ನು ದೂರ ಮಾಡಿದ್ದು, ನಿರ್ಭೀತಿಯಿಂದ ಪೆಪ್ಸಿ ಆಸ್ವಾದಿಸಿ ಎಂದು ಸ್ಪಷ್ಟನೆ ನೀಡಿದೆ. ಇಂತಹ ಹುಸಿ ಸಂದೇಶಗಳನ್ನು ನಂಬಬೇಡಿ. ಒಂದೆರಡು ತಿಂಗಳಿಂದ ಇಂತಹ ಸಂದೇಶ ಹರಿದಾಡುತ್ತಿದೆ. ಹಾಗಂತ, ಪೆಪ್ಸಿ ಕುಡಿಯುವುದನ್ನು ನಿಲ್ಲಿಸಬೇಡಿ ಎಂದು ಕಂಪನಿಯ ಮಾರುಕಟ್ಟೆ ಉಪಾಧ್ಯಕ್ಷೆ ಹೇಮಲತಾ ರಾಘವನ್ ತಿಳಿಸಿದ್ದಾರೆ.
ಅಷ್ಟಕ್ಕೂ ಆಹಾರ, ಕುಡಿಯುವ ನೀರಿನ ಮೂಲಕ ಎಚ್ಐವಿ ಸೋಂಕಾಣು ರವಾನಿಸಲು ಸಾಧ್ಯವೇ? ಈ ರೀತಿ ಸಂದೇಶವನ್ನು ಕಳಿಸುವವರಿಗೆ ವೈಜ್ಞಾನಿಕವಾಗಿ ಇಷ್ಟು ಮಾತ್ರದ ತಿಳಿವಳಿಕೆ ಬೇಡವೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಪೆಪ್ಸಿ ಪಾನೀಯದ ಉತ್ಪಾದನೆ ಮತ್ತು ಮಾರುಕಟ್ಟೆ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪಾನೀಯ ಸೇವನೆಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಕಲಿ ಎಸ್ಎಂಎಸ್ ನಲ್ಲಿ ಹುರುಳಿಲ್ಲ' ಎಂದು ಹೇಮಲತಾ ಹೇಳಿದ್ದಾರೆ.
ಎಸ್ಎಂಎಸ್ ಸಂದೇಶ ಹೀಗಿದೆ: "for d next few days, do not drink any product from pepsi company like pepsi, tropicana juice, slice, 7up , coca cola, etc,,as a worker from the company has added his blood contaminated with HIV. watch NDtv ...please 4ward this 2 every 1 u care about.....ok. Please note seriously."
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications