ಇದು ಯಡಿಯೂರಪ್ಪ ಮೇಲಿನ ತಾಜಾ ಭೂ ಹಗರಣ ಕೇಸ್

BS Yeddyurappa
ಬೆಂಗಳೂರು, ನ.24: ಜೈಲಿನಿಂದ ಈಗಷ್ಟೇ ಹೊರ ಬಂದಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ತಾಜಾ ತಾಜಾ ಭೂ ಹಗರಣದ ದೂರು ದಾಖಲಾಗಿದೆ.

ಡಿನೋಟಿಫಿಕೇಷನ್ ಪ್ರಕರಣದ ಕೇಸ್ ಗಳ ಜಂಜಾಟದಿಂದ ಕೊಂಚ ರಿಲೀಫ್ ಪಡೆದಿರುವ ಯಡಿಯೂರಪ್ಪ ಅವರ ಮೇಲೆ ಅಕ್ರಮವಾಗಿ ಭೂ ಖರೀದಿಸಿದ ಆರೋಪವನ್ನು ಹೊರೆಸಲಾಗಿದೆ.

ವಕೀಲ ಬಿ ವಿನೋದ್ ಅವರು ಲೋಕಾಯುಕ್ತಕ್ಕೆ ನೀಡಿರುವ ದೂರಿನಂತೆ, ಯಡಿಯೂರಪ್ಪ ಹಾಗೂ ಅವರ ಕುಟುಂಬದವರು ಬೇನಾಮಿ ಕಂಪನಿಗಳ ಹೆಸರಿನಡಿಯಲ್ಲಿ 105 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಕಾನೂನು ಉಲ್ಲಂಘಿಸಿ ಖರೀದಿಸಿರುವ ಜಮೀನಿನ ಬೆಲೆ ಕೋಟಿಗಟ್ಟಲೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.

ಮಲ್ಲಿಗೆನಹಳ್ಳಿಯಲ್ಲಿ 11 ಎಕರೆ, ಉರಗದೂರು ನಲ್ಲಿ 2.5 ಎಕರೆ, ಹುಣಸೇಕಟ್ಟೆಯಲ್ಲಿ 45 ಎಕರೆ ಹಾಗೂ ಗುಡ್ದದ ಅರಕೆರೆಯಲ್ಲಿ 5.01 ಎಕರೆ ಜಮೀನನ್ನು ಅಕ್ರಮವಾಗಿ ಖರೀದಿಸಲಾಗಿದೆ ಎಂದು ಇಂಡಿಯಾ ಟುಡೇ ವಿವರವಾಗಿ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+