ಮತ್ತೆ ಲೋಕಾಯುಕ್ತ ಆಗುವುದಕ್ಕೆ ಒಪ್ಪೊಲ್ಲ: ಸಂತೋಷ್ ಹೆಗ್ಡೆ

ಲೋಕಾಯುಕ್ತರಾಗಿ ನ್ಯಾಯಮೂರ್ತಿ ಬನ್ನೂರುಮಠರ ಹೆಸರನ್ನು ಶಿಫಾರಸು ಮಾಡಿ, ಮುಖ್ಯಮಂತ್ರಿ ಸದಾನಂದ ಗೌಡ ನೇತೃತ್ವದ ಸಮಿತಿ ಕಳಿಸಿದ್ದ ಶಿಫಾರಸನ್ನು ಖಡಾಖಂಡಿತವಾಗಿ ತಿರಸ್ಕರಿಸುವ ಮೂಲಕ ರಾಜ್ಯಪಾಲ ಭಾರದ್ವಾಜ್ ರಾಜ್ಯ ರಾಜಕೀಯದಲ್ಲಿ ಸಂಚಲವನ್ನುಂಟು ಮಾಡಿದ್ದಾರೆ.
ಇದರಿಂದ ಅರ್ಹ, ಕಳಂಕರಹಿತ ನ್ಯಾಯಮೂರ್ತಿಗಳಿಗೇನೂ ಬರ ಇಲ್ಲ. ಸೂಕ್ತ ವ್ಯಕ್ತಿಯನ್ನು ಲೋಕಾಯುಕ್ತ ಪೀಠದಲ್ಲಿ ಕುಳ್ಳರಿಸಿ ಎಂದು ರಾಜ್ಯಪಾಲ ಭಾರದ್ವಾಜ್ ಈ ಹಿಂದೆಯೂ ಸಲಗೆ ನೀಡದ್ದರು. ಗಮನಾರ್ಹವೆಂದರೆ ಲೋಕಾಯುಕ್ತ ನೇಮಕ ಈಗಾಗಲೇ ವಿಳಂಬವಾಗಿದೆ. 'ಕರ್ನಾಟಕದ ಲೋಕಾಯುಕ್ತ ಸಂಸ್ಥೆ ಇಡೀ ದೇಶದಲ್ಲೇ ಬಲಿಷ್ಠವಾಗಿದೆ ಎಂಬ ಹೆಸರು ಗಳಿಸಿದೆ. ಅದಕ್ಕೆ ಚ್ಯುತಿ ಬಾರದಂತೆ ಶುದ್ಧ ಹಸ್ತರನ್ನು ನೇಮಿಸಿ' ಎಂಬುದು ರಾಜ್ಯಪಾಲ ಭಾರದ್ವಾಜ್ ಅವರ ಹಕ್ಕೊತ್ತಾಯವಾಗಿದೆ.












Click it and Unblock the Notifications