ರಾಜ್ಯ ಬಿಜೆಪಿ ಸರಕಾರ ಆಧುನಿಕ ಭಸ್ಮಾಸುರ: ಕೃಷ್ಣ ಬೈರೇಗೌಡ

ಇಲ್ಲಿನ ಬಿಜೆಪಿ ಸರಕಾರ ಆಧುನಿಕ ಭಸ್ಮಾಸುರ ಇದ್ದಂತೆ. ಮತದಾರರಾದ ನೀವು ಕೊಟ್ಟ ವರದಿಂದ ಅಧಿಕಾರ ಪಡೆದು ನಿಮ್ಮನ್ನೇ ಭಸ್ಮ ಮಾಡುತ್ತಿದ್ದಾರೆ. ಆದರೆ ಈಗ ಅಧಿಕಾರದ ಮದ ಮತ್ತು ತನ್ನದೇ ತಪ್ಪಿನಿಂದ ತಾನೇ ಭಸ್ಮವಾಗುವ ದಿನಗಳು ದೂರವಿಲ್ಲ ಎಂದು ಕೃಷ್ಣಬೈರೇಗೌಡ ವ್ಯಾಖ್ಯಾನಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಪಾದಯಾತ್ರೆಯ ಅಂಗವಾಗಿ ಸೋಮವಾರ ಸಂಜೆ ಸುಳ್ಯದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಭಾಷಣ ಮಾತನಾಡಿದರು.
ಕಾಂಗ್ರೆಸ್ ಅನೇಕ ಯೋಜನೆಗಳ ಮೂಲಕ ಕರ್ನಾಟಕದ ಗೌರವವನ್ನು ದೇಶಕ್ಕೆ ಎತ್ತಿ ತೋರಿಸಿತ್ತು. ಆದರೆ ಬಿಜೆಪಿ, ಕರ್ನಾಟಕದ ಮರ್ಯಾದೆ ತೆಗೆಯುತ್ತಿದೆ. ನನ್ನಂತಹ ಶಾಸಕನಿಗೆ ವಿಧಾನಸೌಧ ಪ್ರವೇಶಿಸಲು ಹೇಸಿಗೆಯಾಗುತ್ತಿದೆ ಎಂದವರು ಹೇಳಿದರು.












Click it and Unblock the Notifications