ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೀರು ಕೊಡದ ಅಧಿಕಾರಿಗಳಿಗೆ ಚಪ್ಪಲಿ ಎಸೆದ ಹಳ್ಳಿಗರು
ಕುಡಿಯುವ ನೀರಿಗೆ ತತ್ವಾರವಿದ್ದರೂ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನವೆಂಬರ್ನಲ್ಲಿಯೇ ನೀರಿಗೆ ಈ ಮಟ್ಟದಲ್ಲಿ ಸಮಸ್ಯೆ ನಿರ್ಮಾಣವಾಗಿದೆ. ಇನ್ನು ಬೇಸಿಗೆಯಲ್ಲಿ ಅಧಿಕಾರಿಗಳು ಯಾವ ರೀತಿಯಾಗಿ ಸ್ಪಂದಿಸುತ್ತಾರೆ ಎಂದು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಜನರು ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕಿದರು.
ನಂತರ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ, ತಾವು ತಂದಿದ್ದ ಹಳೆ ಚಪ್ಪಲಿ ಪೊರಕೆ ಹಾಗು ಕಿತ್ತು ಹೋದ ಬಿಂದಿಗೆಗಳನ್ನು ಕಚೇರಿ ಮೆಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, "ಅಧಿಕಾರಿ ವರ್ಗ ಭ್ರಷ್ಟರಾಗಿದ್ದಾರೆ. ಕುಡಿಯುವ ನೀರಿಗೂ ರಾಜಕೀಯ ಮಾಡುತ್ತಿದ್ದಾರೆ" ಎಂದು ಕೆಂಡ ಕಾರಿದರು.
Comments
English summary
Villagers of Srinivaspura taluk in Kolar district vent their ire on jilla and taluk panchayat officials by throwing footwear, mob and pots for not getting drinking water properly. There is huge scarcity of drinkng water in the district in winter itself. Ramesh Kumar, former MLA from Srinivaspura led the agitation.
Story first published: Friday, November 18, 2011, 11:56 [IST]