ಕಾಂಗ್ರೆಸ್ಸಿನ ನೂರಾರು ಜನಾರ್ದನ ರೆಡ್ಡಿಗಳ ಬಗ್ಗೆ ಕುಮಾರಣ್ಣನ ಬಳಿ ದಾಖಲೆ

ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಎಚ್. ಡಿ. ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಮಂಗಳವಾರ ಸಿಡಿಸಿದ ಬಾಂಬ್ ಇದು. ಯಡ್ಡಿ-ರೆಡ್ಡಿ ಗ್ಯಾಂಗ್ ಈ ಬಾರಿ ದೀಪಾವಳಿಯನ್ನು ಕಗ್ಗತ್ತಲಲ್ಲಿ ಕಳೆಯುವಂತೆ ಮಾಡಿದ ಕುಮಾರಣ್ಣನ ಬತ್ತಳಿಕೆಯಲ್ಲಿ ಇನ್ನೂ ಯಾವೆಲ್ಲ ಬಾಂಬು, ಬಾಣ ಬಿರುಸುಗಳಿವೆಯೋ!?
ರೆಡ್ಡಿಗಳು ಮಾತ್ರವೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂಬಂತೆ ಕಾಂಗ್ರೆಸ್ ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿನಲ್ಲಿ ನೂರಾರು ಜನಾರ್ದನ ರೆಡ್ಡಿಗಳು ವಿಜೃಂಭಿಸುತ್ತಿದ್ದಾರೆ. ಆ ಪಕ್ಷದ ಸಚಿವ ಮಹೋದಯರೇ ಭಾರಿ ಪ್ರಮಾಣದಲ್ಲಿ ಗಣಿ ಲೂಟಿ ಮಾಡಿರುವ ಬಗ್ಗೆ ಮಾಹಿತಿ ಇದೆ. ಸರಕಾರಿ ಸ್ವಾಮ್ಯದ MSILನಿಂದಲೇ ಅದಿರು ಕಳ್ಳಸಾಗಣೆ ಮಾಡಿದ್ದಾರೆ. ಈ ಕುರಿತು ಎಲ್ಲ ದಾಖಲೆಗಳೂ ನನ್ನಲ್ಲಿವೆ. ಸಿಬಿಐ ಬಯಸಿದರೆ ಅದನ್ನು ಒಂದೊಂದಾಗಿ ಒದಗಿಸುವೆ ಎಂದು ಕುಮಾರಣ್ಣ ಅಕ್ರಮ ಗಣಿ ಚಕ್ರ ಉರುಳಿಸಿದ್ದಾರೆ.












Click it and Unblock the Notifications