ಕಚೇರಿಯಲ್ಲಿ ಕುಳಿತೇ ಅಕ್ರಮ ವರದಿ ಸಿದ್ದಪಡಿಸಿದ ಹೆಗ್ಡೆ ಕ್ಷಮೆಯಾಚಿಸಲಿ

ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡಿ ಎಂದರೆ ನಿಮ್ಮ ಕಣ್ಣಿಗೆ ಬಿದ್ದಿದ್ದು ರೆಡ್ಡಿ ಸೋದರರು ಮತ್ತು ಯಡಿಯೂರಪ್ಪ ಮಾತ್ರ. ಆ ವರದಿಯನ್ನೂ ಕಚೇರಿಯಲ್ಲೇ ಕುಳಿತು ಸಿದ್ಧಪಡಿಸಿದ್ದೀರಿ ಎಂದು ಬಿ.ಎಸ್. ಯಡಿಯೂರಪ್ಪ ಹೆಗ್ಡೆ ಅವರನ್ನು ತೀವವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
'ನಿಮ್ಮ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅಂದು ನಿಮ್ಮ ಜತೆಗಿದ್ದ ಅಧಿಕಾರಿ ಹೇಳಿದ್ದಾರೆ. ಲೋಕಾಯುಕ್ತ ಮುಖ್ಯಸ್ಥರಾಗಿ ಯಾವುದೇ ಕ್ರಮ ಕೈಗೊಳ್ಳದ ನಿಮಗೆ ವಿಧಾನಸೌಧದಲ್ಲಿ ಕುಳಿತವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಈ ಬಗ್ಗೆ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ' ಎಂದು ಹೆಗ್ಡೆ ಅವರನ್ನು ಯಡಿಯೂರಪ್ಪ ಎಚ್ಚರಿಸಿದ್ದಾರೆ.











Click it and Unblock the Notifications