ಜನಾ ರೆಡ್ಡಿ ಜೈಲಿನಲ್ಲಿ; ಬಳ್ಳಾರಿ ಜನ ನೆಮ್ಮದಿಯ ಮಡಿಲಲ್ಲಿ
ಬಳ್ಳಾರಿ,
ನ.11: ಬಳ್ಳಾರಿಯ (ಅಕ್ರಮ) ಗಣಿವೀರ ಜನಾರ್ದನ ರೆಡ್ಡಿ ಪ್ರಸ್ತುತ ಚಂಚಲಗೂಡ ಜೈಲಿನಲ್ಲಿ ಕೈದಿ ನಂ. 697 ಆಗಿ ವಿಶ್ರಮಿಸಿಕೊಳ್ಳುತ್ತಿರುವುದ ಎಲ್ಲರಿಗೂ ತಿಳಿದ ವಿಷಯವೇ. ಆದರೆ ಅವರ ಬ್ಯಾಂಕ್ ಖಾತೆ ಸೇರಿದಂತೆ ಇತರೆ ಖಾತೆಗಳನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡ ನಂತರ ಅವರ ಈಗಿನ ಲೆಕ್ಕ, ಜಮಾ ಹೇಗಿದೆ ಎಂಬ ಕುತೂಹಲ ತಣಿಯಲು ಮುಂದೆ ಓದಿ... id="toptextpromo">ಅವರ
ಸೋದರರೂ ಸೇರಿದಂತೆ ಆಪ್ತ ಕುಟುಂಬ ವರ್ಗದವರು ಶೋಕತಪ್ತರಾಗಿದ್ದಾರೆ. ಇನ್ನು ತಿಂಗಳಿಗೆ 50 ಸಾವಿರ ರು. ಪಡೆಯುತ್ತಿದ್ದ ಮನೆಯ ಅಡುಗೆಯವ ಎಲ್ಲಿಗೋದ ಎಂಬುದರ ಬಗ್ಗೆ ನಿಖರ ಮಾಹಿತಿಯಿಲ್ಲ. ರೆಡ್ಡಿ ಹೆಂಡ್ತಿ, ಮಕ್ಕಳು ವಿವಾಹಭೋಜನಂಬು ಇಲ್ಲದೆ ಸಪ್ಪೆ ಸಪ್ಪೆ ಊಟಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.ರೆಡ್ಡಿ ನಿವಾಸ 'ಕುಠೀರ'ವೀಗ ಶೋಕ ವನವಾಗಿದೆ. 'ಬೆಂಗಳೂರು ಮಿರರ್' ಪತ್ರಿಕೆಯ ಹಿರಿಯ ವರದಿಗಾರ ನಿರಂಜನ ಕಗ್ಗೆರೆ ಇದರ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>
ಕಳೆದ
ಎರಡು ತಿಂಗಳಿಂದ ರೆಡ್ಡಿ ಮನೆಯ ಮೇಲೆ ಹೆಲಿಕಾಪ್ಟರುಗಳು ಹಾರಾಡಿಲ್ಲ. ಕಿವಿಗಡಕಿಚ್ಚುವ ಸದ್ದು ಇಲ್ಲ. ಕುಠೀರದೊಳಗೆ ಕುದಿಮೌನವಿದ್ದರೆ ಹೊರಗೆ ಪ್ರಶಾಂತ ವಾತಾವರಣ. ಅಷ್ಟರಮಟ್ಟಿಗೆ ಹಾವಭಾವಿ ಬಡಾವಣೆಯ ಜನ ಶಾಂತಿಯಿಂದ ಇದ್ದಾರೆ.











Click it and Unblock the Notifications