ವರ್ಗಾವಣೆ ಆರೋಪಕ್ಕೆ ಸದಾನಂದ ಗೌಡ ತಾಜಾ ಉತ್ತರ

DV Sadananda gowda
ಬೆಂಗಳೂರು, ನ.13: ಪೊಲೀಸ್ ವರ್ಗಾವಣೆಯಲ್ಲಿ ನನ್ನ ಹಾಗೂ ಗೃಹಸಚಿವರ ಹಸ್ತಕ್ಷೇಪವಿಲ್ಲ. ಇದರಲ್ಲಿ ಭ್ರಷ್ಟರನ್ನು ರಕ್ಷಣೆ ಮಾಡುವ ಉದ್ದೇಶವಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ವರ್ಗಾವಣೆ ಮಾಡಲಾಗಿದೆ.

ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿ ಹಿರಿಯ ರಾಜಕಾರಣಿ (ಎಚ್ ಡಿ ದೇವೇಗೌಡ) ಅವರು ಕರೆ ಮಾಡಿ ತೋರಿಸಿದ ಕಳಕಳಿ ಹಾಗೂ ನಂತರ ಗಾಂವ್ಕರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರ ಆಧಾರಿಸಿ ವರ್ಗಾವಣೆ ಮಾಡಲಾಗಿದೆ. ಗಣಿ ವರದಿಯಲ್ಲಿ ಹೆಸರಿಸಿರುವ ಅಧಿಕಾರಿಗಳನ್ನು ಮಾತ್ರ ವರ್ಗಾ ಮಾಡಲಾಗಿದೆ ಎಂದು ಸದಾನಂದ ಗೌಡರು ಸ್ಪಷ್ಟನೆ ನೀಡಿದರು.

ನೂತನ ಲೋಕಾಯುಕ್ತರ ನೇಮಕಾತಿ ಬಗ್ಗೆ ಸಂಶಯಗಳು ಬಂದಿರುವುದು ನಿಜ. ಈ ಮುಂಚೆ ಅನುಸರಿಸಿದ ಕ್ರಮವನ್ನೇ ಬಳಕೆ ಮಾಡಿದ್ದೇವೆ. ಸರ್ಕಾರಕ್ಕೆ ನಮ್ಮ ಆಯ್ಕೆಯನ್ನು ನೀಡಿ ಆಯ್ಕೆ ಬಗ್ಗೆ ವಿವರಿಸಿದ್ದೇವೆ. ರಾಜ್ಯಪಾಲರ ತೀರ್ಮಾನವೇ ಅಂತಿಮ ಎಂದು ಸದಾನಂದ ಗೌಡರು ಹೇಳಿದರು.

ಸುದ್ದಿಗೋಷ್ಠಿಯುದ್ದಕ್ಕೂ ದೇವೇಗೌಡರ ಪ್ರಕರಣದ ಪ್ರಸ್ತಾಪ ಮಾಡಿದ ಸದಾನಂದ ಗೌಡರು ಒಮ್ಮೆ ಕೂಡಾ ಅವರ ಹೆಸರು ಹೇಳದೆ 'ಮಾಜಿ ಪ್ರಧಾನಿಗಳು', 'ಹಿರಿಯ ರಾಜಕಾರಣಿ' ಎಂದು ಸಂಬೋಧಿಸಿದ್ದು ವಿಶೇಷ. ಲೋಕಾಯುಕ್ತ ಎಡಿಜಿಪಿ ಜೀವನ್ ವಿ. ಗಾಂವ್ಕರ್ ವರ್ಗಾವಣೆಯಲ್ಲಿ ನಮ್ಮ ಪಾತ್ರವೇನು ಇಲ್ಲ ಎಂದು ಸದಾನಂದ ಗೌಡರು ಕೈ ತೊಳೆದು ಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+