ಹಿಂದೂಗಳ ಮತಾಂತರ ಮಾಡಿಸುವವರಿಗೆ ಮರಣದಂಡನೆ: ತೊಗಾಡಿಯ

ನಗರದ ಹೊರವಲಯದಲ್ಲಿರುವ ಪಿರಾನ ದರ್ಗಾದ ಸಮೀಪ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇಶಾದ್ಯಂತದಿಂದ ಆಗಮಿಸಿದ್ದ ವಿಎಚ್ಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಕ್ರೀದ್ ಆಚರಣೆಯೂ ಇದ್ದ ಹಿನ್ನೆಲೆಯಲ್ಲಿ ಸಮಾವೇಶದಿಂದ ಪೊಲೀಸರು ಹಾಗೂ ಸ್ಥಳೀಯ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ. ಆದಾಗ್ಯೂ, ಸಮ್ಮೇಳನ ಶಾಂತಿಯುತವಾಗಿ ಕೊನೆಗೊಂಡಿದೆ.
ಗಮನಾರ್ಹವೆಂದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ಹೆಸರನ್ನು ಪ್ರಸ್ತಾಪಿಸದೆ ಅವರ ವಿರುದ್ಧವೂ ತೊಗಾಡಿಯ ಕಿಡಿಗಾರಿದ್ದಾರೆ. ಸದ್ಭಾವನಾ ಮಿಶನ್ನಲ್ಲಿ ಮೋದಿ ಮುಸ್ಲಿಮರನ್ನು ಓಲೈಸಿರುವುದನ್ನು ವಿರೋಧಿಸಿದ ತೊಗಾಡಿಯ, ಅಲ್ಪ ಸಂಖ್ಯಾತರನ್ನು ಓಲೈಸುವುದು ಅವರಿಗೂ (ಮೋದಿಗೆ) 'ಫ್ಯಾಶನ್" ಆಗಿ ಬಿಟ್ಟಿತು ಎಂದು ಹೇಳಿದ್ದಾರೆ.












Click it and Unblock the Notifications