ಜೈಲಿನಿಂದ 3 ವಿಚಾರಣಾಧೀನ ಕೈದಿಗಳು ಪರಾರಿ

ಪರಾರಿಯಾಗಿರುವವರನ್ನು ಕಾಡಯ್ಯ ಪೂಜಾರಿ, ಯೇಸುರತ್ನ ಮತ್ತು ರೇವಪ್ಪ ಎಂದು ಗುರುತಿಸಲಾಗಿದೆ. ಬಂಗಾರದೊಡವೆಗಳನ್ನು ಕದ್ದ ಆರೋಪಕ್ಕೆ ಸಂಬಂಧಿಸಿದಂತೆ ಅವರು ವಿಚಾರಣೆಯನ್ನು ಎದುರಿಸುತ್ತಿದ್ದರು. ಇನ್ನೂ ಅನೇಕ ಕಳ್ಳತನ ಮಾಡಿದ ಮಾಡಿದ ಆರೋಪ ಅವರ ಮೇಲಿವೆ.
ತಪ್ಪಿಸಿಕೊಂಡಿರುವ ಆರೋಪಿಗಳನ್ನು ಹಿಡಿಯಲು ಪೊಲೀಸರು ಮತ್ತೆ ಬಲೆ ಬೀಸಿದ್ದಾರೆ. ಹಾಗೆಯೆ, ಈ ಪರಾರಿ ಪ್ರಕರಣದ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಪೊಲೀಸರ ಸಾಹಸ : ಬಿಜಾಪುರದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಓಡುತ್ತಿರುವ ರೈಲಿನಿಂದ ಜಿಗಿದು ಪರಾರಿಯಾಗಲು ಕೈದಿ ಯತ್ನಿಸಿದ್ದಾನೆ. ಅವನನ್ನು ಕರೆತರುತ್ತಿದ್ದ ಪೊಲೀಸರು ಕೂಡ ರೈಲಿನಿಂದ ಜಿಗಿದು ಆತನನ್ನು ಹಿಡಿದು ಸಾಹಸ ಮೆರೆದಿದ್ದಾರೆ.
ಮಹಾರಾಷ್ಟ್ರದ ಯರವಾಡ ಜೈಲಿನಿಂದ ಬಿಜಾಪುರಕ್ಕೆ ಆತನನ್ನು ಇಬ್ಬರು ಪೊಲೀಸರು ಕರೆತರುತ್ತಿದ್ದರು. ಆಗ, ಸಮಯ ನೋಡಿ ರೈಲಿನಿಂದ ಜಿಗಿದು ಓಡಲು ಕೈದಿ ಯತ್ನಿಸಿದ್ದಾನೆ. ಕೈದಿ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications