ಬಿಸ್ಕತ್ತು ತಿನ್ನಿಸಿ, ಟ್ಯಾಬ್ಲೆಟ್ಟು ನುಂಗಿಸಿದ ಶ್ರೀನಿಧಿ ಪುಸ್ತಕ

ಯುವಬರಹಗಾರ, ಅಂಕಣಕಾರ ಶ್ರೀನಿಧಿ ಟಿ.ಜಿ.ಯವರ ಈ ಪುಸ್ತಕವನ್ನು ಪ್ರೊ,ಜಿ.ವೆಂಕಟಸುಬ್ಬಯ್ಯ ಹಾಗೂ ಮಠ ಗುರುಪ್ರಸಾದ್ ಬಿಡುಗಡೆ ಮಾಡಿ ಮಾತನಾಡಿದರು. www.ejnana.com ಮತ್ತು 'ಆಕೃತಿ ಪುಸ್ತಕ'ದಿಂದ ಪ್ರಕಟವಾಗಿರುವ ಈ ಪುಸ್ತಕಕ್ಕೆ ಅದರಲ್ಲಿನ ಉಪಯುಕ್ತ ವಿಷಯಗಳಿಗೆ ಮತ್ತು ಸರಳ ಭಾಷೆಯ ಬಳಕೆಗೆ ಅತಿಥಿಗಳಿಂದ, ಹಿರಿಯರಿಂದ ಶಭಾಷ್ಗಿರಿ ದೊರಕಿತು.
ಜೋಶ್ ತುಂಬಿದ ಜೋಶಿ ಭಾಷಣ: ಅಂಕಣಕಾರ ಶ್ರೀವತ್ಸಜೋಶಿಯವರು ಅಮೆರಿಕಾದಲ್ಲೇ ಕುಳಿತು ಈ ಪುಸ್ತಕದ ಬಗ್ಗೆ ಮಾತನಾಡಿದ್ದು, ಅದನ್ನು ಸಭಾಂಗಣದಲ್ಲಿ ಪ್ರಸಾರ ಮಾಡಿದ್ದು ವಿಶೇಷವಾಗಿದ್ದು ಕಾರ್ಯಕ್ರಮಕ್ಕೆ ಒಂದು ತಾಂತ್ರಿಕ ಕಳೆ ತಂದುಕೊಟ್ಟಿತು.
ಬಹುಶಃ ಪ್ರಪ್ರಥಮ ಇ ಭಾಷಣ ಇದೇ ಎನಿಸುತ್ತದೆ. ಭಾಷಣದ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ
ಭಾಷೆ ಬೆಳೆಯಬೇಕು: ಭಾಷಾತಜ್ಞ ಪ್ರೊ.ಜಿ.ವಿ. ಪುಸ್ತಕದ ಭಾಷೆಯ ಬಗ್ಗೆ ಬಹಳ ಸಂತಸಪಟ್ಟರು. ಪಾರಿಭಾಷಿಕ ಶಬ್ದಗಳ ಭಾರದಿಂದ ನಲುಗದೇ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಭಾಷೆ ಮತ್ತು ಪದಗಳನ್ನು ಬಳಸಿ ಬರೆದಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಂಪ್ಯೂಟರ್ ಮುಂತಾದ ತಂತ್ರಜ್ಞಾನ ಸಂಬಂಧಿತ ಪದಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಆಭಾಸ ಮಾಡುವುದರ ಬದಲು ಹಾಗೆಯೇ ಬಳಸಿದರೆ ಜನಕ್ಕೆ ಅರ್ಥವೂ ಆಗುತ್ತದೆ ಮತ್ತು ಭಾಷೆಯೂ ಬೆಳೆಯುತ್ತದೆ ಎಂದು ಹೇಳಿದರು.
ಶಾಲಾಶಿಕ್ಷಣದ ಪಠ್ಯಕ್ರಮದಲ್ಲಿ ಈ ಪದ್ಧತಿಯನ್ನು ಮೊದಲಿಂದಲೇ ಅಳವಡಿಸಿದ್ದರೆ ಇವತ್ತು ಕನ್ನಡ ಮಾಧ್ಯಮ, ಇಂಗ್ಲೀಷ್ ಮಾಧ್ಯಮ ತಾರತಮ್ಯ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ತಮಗೆ ಕಂಪ್ಯೂಟರ್ ಬಳಕೆ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲದಿದ್ದರೂ ಕೂಡ ಈ ಪುಸ್ತಕವನ್ನು ಓದಿದ ಮೇಲೆ ಅದರಲ್ಲಿನ ವಿಚಾರಗಳು ಅರ್ಥವಾದವು, ಆದ್ದರಿಂದ ಇದು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಬಹಳ ಸಹಾಯವಾಗುತ್ತದೆ ಮತ್ತು ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯುವವರಿಗೆ ಇದು ಮಾದರಿ ಪುಸ್ತಕ ಎಂದರು.
ಸಿನೆಮಾಗೆ ಬರಹಗಾರರು ಬೇಕು ಎಂದ ಮಠ ನಿರ್ದೇಶಕ ಗುರುಪ್ರಸಾದ್ ಭಾಷಣ ಹೇಗಿತ್ತು? ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು ಪುಸ್ತಕದಲ್ಲಿ ಅಂಥದ್ದೇನಿದೆ? ಮುಂದೆ ಓದಿ...
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications