ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ನೀರಲ್ಲಿ ಮುಳುಗಿ ಸಾವು : ಜಾಲಹಳ್ಳಿಯ ಮದರ್ ತೆರೆಸಾ ಶಾಲೆಯಲ್ಲಿ ಓದುತ್ತಿದ್ದ 8 ವರ್ಷದ ತೇಜಸ್ ರೆಸಾರ್ಟಲ್ಲಿ ಈಜುಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಮಕ್ಕಳನ್ನು ಶಾಲೆಯಿಂದ ನೆಲಮಂಗಲ ಬಳಿಯ ಟಿ.ಬೇಗೂರಿನಲ್ಲಿರುವ ರೆಸಿಡೆನ್ಸಿ ಹಾಲಿಡೇ ರೆಸಾರ್ಟಿಗೆ ಪಿಕ್ನಿಕ್ಕಿಗೆಂದು ಕರೆದೊಯ್ದಾಗ ಈ ದುರ್ಘಟನೆ ಸಂಭವಿಸಿದೆ.
ಆಟವಾಡುತ್ತಿದ್ದ ಸಮಯದಲ್ಲಿ ತೇಜಸ್ ನೀರಿಗೆ ಬಿದ್ದಿದ್ದಾನೆ. ಆತನನ್ನು ನೀರಿನಿಂದೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೇಜಸ್ ಬದುಕುಳಿಯಲಿಲ್ಲ. ಮಕ್ಕಳನ್ನು ಸಂತಸಗೊಳಿಸಲೆಂದು ಆಯೋಜಿಸಲಾಗಿದ್ದ ಪಿಕ್ನಿಕ್ ದುರಂತದಲ್ಲಿ ಕೊನೆಗೊಂಡಿದೆ.
ಯುವ ಗಾಯಕ ನೇಣಿಗೆ ಶರಣು : ಓದಿನ ಕಡೆ ಲಕ್ಷ್ಯ ಕೊಡು, ಸಂಗೀತ ಆಮೇಲೆ ಎಂದು ತಂದೆ ತಾಯಿಯರು ಮಗನಿಗೆ ಅಪ್ಪಣೆ ಕೊಡಿಸಿದ್ದೇ ತಪ್ಪಾಯಿತು. ಓದಿಗಿಂತ ಗಾಯಕನಾಗಿ ಮಿಂಚಬಯಸಿದ್ದ, ಬಿಬಿಎಂ ಓದುತ್ತಿದ್ದ ಆದಿತ್ಯ ನಾಡಿಗ್ ಮುನಿಸಿಕೊಂಡು ಉರುಳು ಹಾಕಿಕೊಂಡು ಇಹಲೋಕದ ವ್ಯಾಪಾರಕ್ಕೆ ಬೈಬೈ ಹೇಳಿದ್ದಾನೆ.
ಚಿಕ್ಕಂದಿನಿಂದಲೂ ಸಂಗೀತವನ್ನು ಪೂಜಿಸಿ ಆರಾಧಿಸುತ್ತಿದ್ದ ಆದಿತ್ಯನಿಗೆ ಮುಂಬೈನಲ್ಲಿ ಹಾಡುವ ಅವಕಾಶ ಕೂಡಿಬಂದಿತ್ತು. ಆದರೆ, ಪಾಲಕರಿಗೆ ಅವನನ್ನು ಮುಂಬೈಗೆ ಕಳಿಸಲು ಇಷ್ಟವಿರಲಿಲ್ಲ. ತಂದೆ ಮತ್ತು ಮಗನ ನಡುವೆ ವಾಗ್ವಾದ ನಡೆದಿದೆ. ಆದಿತ್ಯ ಇಟ್ಟಮಡುನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಓದಿಗೆ ಮಾತ್ರವಲ್ಲ ಸಂಗೀತಕ್ಕೂ ಗುಡ್ ಬೈ ಹೇಳಿದ್ದಾನೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications