ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ನೀರಲ್ಲಿ ಮುಳುಗಿ ಸಾವು : ಜಾಲಹಳ್ಳಿಯ ಮದರ್ ತೆರೆಸಾ ಶಾಲೆಯಲ್ಲಿ ಓದುತ್ತಿದ್ದ 8 ವರ್ಷದ ತೇಜಸ್ ರೆಸಾರ್ಟಲ್ಲಿ ಈಜುಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಮಕ್ಕಳನ್ನು ಶಾಲೆಯಿಂದ ನೆಲಮಂಗಲ ಬಳಿಯ ಟಿ.ಬೇಗೂರಿನಲ್ಲಿರುವ ರೆಸಿಡೆನ್ಸಿ ಹಾಲಿಡೇ ರೆಸಾರ್ಟಿಗೆ ಪಿಕ್ನಿಕ್ಕಿಗೆಂದು ಕರೆದೊಯ್ದಾಗ ಈ ದುರ್ಘಟನೆ ಸಂಭವಿಸಿದೆ.
ಆಟವಾಡುತ್ತಿದ್ದ ಸಮಯದಲ್ಲಿ ತೇಜಸ್ ನೀರಿಗೆ ಬಿದ್ದಿದ್ದಾನೆ. ಆತನನ್ನು ನೀರಿನಿಂದೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೇಜಸ್ ಬದುಕುಳಿಯಲಿಲ್ಲ. ಮಕ್ಕಳನ್ನು ಸಂತಸಗೊಳಿಸಲೆಂದು ಆಯೋಜಿಸಲಾಗಿದ್ದ ಪಿಕ್ನಿಕ್ ದುರಂತದಲ್ಲಿ ಕೊನೆಗೊಂಡಿದೆ.
ಯುವ ಗಾಯಕ ನೇಣಿಗೆ ಶರಣು : ಓದಿನ ಕಡೆ ಲಕ್ಷ್ಯ ಕೊಡು, ಸಂಗೀತ ಆಮೇಲೆ ಎಂದು ತಂದೆ ತಾಯಿಯರು ಮಗನಿಗೆ ಅಪ್ಪಣೆ ಕೊಡಿಸಿದ್ದೇ ತಪ್ಪಾಯಿತು. ಓದಿಗಿಂತ ಗಾಯಕನಾಗಿ ಮಿಂಚಬಯಸಿದ್ದ, ಬಿಬಿಎಂ ಓದುತ್ತಿದ್ದ ಆದಿತ್ಯ ನಾಡಿಗ್ ಮುನಿಸಿಕೊಂಡು ಉರುಳು ಹಾಕಿಕೊಂಡು ಇಹಲೋಕದ ವ್ಯಾಪಾರಕ್ಕೆ ಬೈಬೈ ಹೇಳಿದ್ದಾನೆ.
ಚಿಕ್ಕಂದಿನಿಂದಲೂ ಸಂಗೀತವನ್ನು ಪೂಜಿಸಿ ಆರಾಧಿಸುತ್ತಿದ್ದ ಆದಿತ್ಯನಿಗೆ ಮುಂಬೈನಲ್ಲಿ ಹಾಡುವ ಅವಕಾಶ ಕೂಡಿಬಂದಿತ್ತು. ಆದರೆ, ಪಾಲಕರಿಗೆ ಅವನನ್ನು ಮುಂಬೈಗೆ ಕಳಿಸಲು ಇಷ್ಟವಿರಲಿಲ್ಲ. ತಂದೆ ಮತ್ತು ಮಗನ ನಡುವೆ ವಾಗ್ವಾದ ನಡೆದಿದೆ. ಆದಿತ್ಯ ಇಟ್ಟಮಡುನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಓದಿಗೆ ಮಾತ್ರವಲ್ಲ ಸಂಗೀತಕ್ಕೂ ಗುಡ್ ಬೈ ಹೇಳಿದ್ದಾನೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications