ಸಿವಿ ನಾಗೇಶ್ ದಟ್ಸ್ ಕನ್ನಡಕ್ಕೆ ನೀಡಿದ ಸಂದರ್ಶನ ನಿರೀಕ್ಷಿಸಿ

ಅವರ ಮಾತಿನಲ್ಲಿ ಹೆಚ್ಚು ಬೇಸರ, ತುಸು ಆಶ್ಚರ್ಯ ವ್ಯಕ್ತವಾಗಿದ್ದು ಸ್ಪಷ್ಟವಾಗಿತ್ತು. ಏಕೆಂದರೆ ಜೈಲು ಸೇರಿಕೊಂಡಿರುವ ಈ ಅತಿರಥ ಮಹಾರಥರ ಪೈಕಿ ಅನೇಕ ಮಂದಿಯ ಪರವಾಗಿ ಅವರು ವಿಭಿನ್ನ ಕೋರ್ಟುಗಳಲ್ಲಿ ವಕಾಲತ್ತು ವಹಿಸಿದ್ದಾರೆ.
ಸೋ, ಒಂದಕ್ಕಿಂತ ಒಂದು ಭಿನ್ನವಾದ ಈ ಕೋರ್ಟುಗಳು ಒಟ್ಟಿಗೇ ಮಾತನಾಡಿಕೊಂಡಂತೆ 'ಯಾವುದೇ ಖ್ಯಾತನಾಮ ಕಟಕಟೆಗೆ ಬಂದು ನಿಂತರೆ ಅವರನ್ನು ಹಿಂದುಮುಂದು ನೋಡದೆ ಅವರನ್ನು ಜೈಲಿಗಟ್ಟುವ ಅಪೂರ್ವ ತೀರ್ಮಾನಕ್ಕೆ ಬದ್ಧವಾಗಿರುವಂತೆ ಗೋಚರಿಸುತ್ತಿರುವಾಗ' ಸಿವಿ ನಾಗೇಶ್ ಅವರಿಗೆ ನ್ಯಾಯ ಸಮ್ಮತವಾಗಿಯೇ ಇದರಿಂದ ಬೇಜಾರಾಗಿತ್ತು.
'ಅಲ್ರೀ, ಮತ್ತಿನ್ನೇನು? ಎಂತೆಂಥಾ ಕೊಲೆಗಡುಕರು, ಅತ್ಯಾಚಾರಿಗಳು, ಪರಮ ಪಾತಕಿಗಳಿಗೆ ಕ್ಷಣಾರ್ಧದಲ್ಲಿ ಬೇಲ್ ಕೊಡಿಸುವ ಪರಿಪಾಠ ಬೆಳೆಸಿಕೊಂಡಿರುವಾಗ ಇದೇನಿದು, ಕೋರ್ಟುಗಳು ಖ್ಯಾತನಾಮರ ಮೇಲೆ ಹೀಗೆ ಮುರುಕೊಂಡು ಬಿದ್ದಿವೆ. ಅಲ್ರೀ ಖಾಸಗಿ ದೂರನ್ನು ಆಧರಿಸಿ, ಆರೋಪಿಯನ್ನು ಜೈಲಿಗಟ್ಟಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಅಂದರೆ ನಂಬೋಕೂ ಆಗ್ತಿಲ್ಲ? ಎಂದು ಕಿಡಿಕಾರಿದರು.
'ಇವು ಯಾವುವೂ ಘನಂಧಾರಿ ಪ್ರಕರಣಗಳೇ ಅಲ್ಲ ಕೇಳಿ. ಎಲ್ಲಾ ಪೆಟ್ಟಿ ಕೇಸುಗಳು. ಅಸಲಿಗೆ ಅವರುಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ಯಾವುವೂ ನಾನ್ ಬೇಲಬಲ್ ಅಲ್ಲವೇ ಅಲ್ಲ' ಎಂದು ಹಾಸ್ಯದ ಧಾಟಿಯಲ್ಲೇ ಗರಂ ಆಗಿ ಪ್ರತಿಕ್ರಿಯುಸುತ್ತಾ ಸಾಗಿದರು ನಾಗೇಶ್.
ಇದೇನಿದು ತಮ್ಮ ಕಕ್ಷಿದಾರರನ್ನು ರಕ್ಷಿಸಿಕೊಳ್ಳುವ ಧಾವಂತದಲ್ಲಿ ನಾಗೇಶ್ ನ್ಯಾಯಕ್ಕೇ ಎಳ್ಳು ನೀರು ಬಿಡುತ್ತಿದ್ದಾರೆ ಅನಿಸಿದ್ದು ನಿಜ. ಅಂದಹಾಗೆ ಇವರು ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಮಣ್ಯ, 2ಜಿ ಹಗರಣ ಮುಂತಾದ ಕೇಸುಗಳನ್ನು ಕೈಗೆತ್ತಿಕೊಂಡಿದ್ದಾರೆ.
ಆದರೆ ವಿಷಯ ಅದಲ್ಲ. ನಾಗೇಶ್ ಅವರು ಹೇಳಿದಂತೆ ಯಾವ ಕೋರ್ಟುಗಳು ಪ್ಲೇಯಿಂಗ್ ಟು ದಿ ಗ್ಯಾಲರಿ ಆಗಿವೆಯೋ ಅವುಗಳ ನ್ಯಾಯಸಮ್ಮತ ಆದೇಶಗಳಿಗೆ ಮರ್ಮಾಘಾತವಾಗುವಂತೆ ಘನ ನ್ಯಾಯಾಲಯವೊಂದು ನಿನ್ನೆ ಖ್ಯಾತನಾಮರಿಗೆ ಜಾಮೀನು ದಯಪಾಲಿಸಿ ಬಿಟ್ಟಿದೆ. ಅಷ್ಟೇ ಅಲ್ಲ ಈ ಹಿಂದೆ ಜಾಮೀನು ನೀಡದ ನ್ಯಾಯಾಲಯಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ.
ಅಲ್ಲಿಗೆ ಯಾವ ಕೋರ್ಟುಗಳು ಪ್ಲೇಯಿಂಗ್ ಟು ದಿ ಗ್ಯಾಲರಿ ಎಂದು ತೀರ್ಪುಗಳು ನೀಡುತ್ತಿದ್ದವೋ ಅವುಗಳನ್ನು ರೆಕ್ಟಿಫೈ ಮಾಡಲು ಹೊರಟಿದೆಯೇ ರಾಜ್ಯ ಉಚ್ಛ ನ್ಯಾಯಾಲಯ!? ಮುಂದೆ ಚರ್ಚಿಸೋಣ ...
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications