ವೆಂಕಟಮ್ಮನಹಳ್ಳಿ ಹತ್ಯಾಕಾಂಡ : ನಕ್ಸಲರು ದೋಷಮುಕ್ತ

2005ರ ಫೆಬ್ರವರಿ 5ರಂದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್ಪಿ ಕ್ಯಾಂಪಿಗೆ ನುಗ್ಗಿ ಓರ್ವ ನಾಗರಿಕ ಸೇರಿ 6 ಪೊಲೀಸರ ನರಮೇಧ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿದಂತೆ ಅಶ್ವತ್ಥ, ಗಂಗಣ್ಣ, ನರಸಿಂಹ, ವೆಂಕಟೇಶ್ ಸೇರಿದಂತೆ 19 ಜನರನ್ನು ಬಂಧಿಸಲಾಗಿತ್ತು.
2005ರಲ್ಲಿ ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ ನಕ್ಸಲರ ನಾಯಕ ಸಾಕೇತ್ ರಾಜನ್ ನನ್ನು ಪೊಲೀಸರು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದರು. ಈ ಹತ್ಯೆಗೆ ಪ್ರತೀಕಾರವಾಗಿ ಕೆಎಸ್ಆರ್ಪಿ ಕ್ಯಾಂಪಿನ ಮೇಲೆಯೇ ದಾಳಿ ಮಾಡಿ ಪೊಲೀಸರನ್ನು ಗುಂಡಿಕ್ಕಿ ಕೊಂದುಹಾಕಲಾಗಿತ್ತು.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಗಳನ್ನು ಬಂಧಮುಕ್ತ ಮಾಡಲಾಗಿದೆ ಎಂದು ನ್ಯಾಯಾಧೀಶ ಎನ್ ಆನಂದ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸರಕಾರಿ ವಕೀಲ ಬಿಕ್ಕಣನವರ್ ಅವರು ಹೇಳಿದ್ದಾರೆ.












Click it and Unblock the Notifications