Get Updates
Get notified of breaking news, exclusive insights, and must-see stories!

ಯಡ್ಡಿಯನ್ನು ಜೈಲಿಗೆ ತಳ್ಳಿದ ಬಾಷಾ ವಿರುದ್ಧ ಎಫ್ಐಆರ್

FIR filed against Sirajin Basha
ಬೆಂಗಳೂರು, ಅ. 29 : ಭೂ ಹಗರಣಕ್ಕೆ ಸಂಬಂಧಿಸಿದಂತೆ ಒಂದರ ಹಿಂದೊಂದರಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ಜಡಿದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಜೈಲಿಗೆ ತಳ್ಳಲು ಕಾರಣರಾದ ವಕೀಲ ಸಿರಾಜಿನ್ ಬಾಷಾ ವಿರುದ್ಧವೇ ಈಗ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

6ನೇ ಎಸಿಎಂಎಂನಲ್ಲಿ ಗಜೇಂದ್ರ ಎಂಬುವವರು, ಯಡಿಯೂರಪ್ಪ ವಿರುದ್ಧ ಸಿರಾಜಿನ್ ಬಾಷಾ ನಕಲಿ ದಾಖಲಿ ಸೃಷ್ಟಿಸಿ ನ್ಯಾಯಾಲಯದ ದಿಕ್ಕು ತಪ್ಪಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಖಾಸಗಿ ದೂರನ್ನು ಸ್ವೀಕರಿಸಿದ್ದ ಮ್ಯಾಜಿಸ್ಟ್ರೇಟ್ ಅವರು ಸಿರಾಜಿನ್ ಬಾಷಾ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿದ್ದರು.

ಇದರಂತೆ ಹಲಸೂರು ಪೊಲೀಸರು ಸಿರಾಜಿನ್ ಬಾಷಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಯಡಿಯೂರಪ್ಪ ಅವರನ್ನು ಜೈಲಿಗೆ ತಳ್ಳಲು ಕಾರಣವಾದ ದಾಖಲೆಗಳ ಸತ್ಯಾಸತ್ಯಗಳನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಷಾ ಅವರು ಸಲ್ಲಿಸಿದ್ದ ದಾಖಲೆಗಳು ನಕಲಿ ಅಥವಾ ಸುಳ್ಳು ಎಂಬುದು ಸಾಬೀತಾದರೆ ಜೈಲಿಗೆ ಹೋಗುವ ಸರದಿ ಬಾಷಾ ಅವರದಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+