ಅಪರಾಧಿಗಳಿಗೆ ನನ್ನ ಸಂಪುಟದಲ್ಲಿ ಸ್ಥಾನವಿಲ್ಲ: ಡಿವಿಎಸ್

ಆದರೆ, ಬಿಜೆಪಿ ನಾಯಕರನ್ನು ಆರಿಸಿಕೊಂಡು ಜಾಲದೊಳಗೆ ಸಿಲುಕಿಸುವ ತಂತ್ರಗಾರಿಕೆ ನಡೆದಿದೆ. ವಿಪಕ್ಷಗಳ ಈ ತಂತ್ರ ಬಯಲಿಗೆಳೆಯಬೇಕಿದೆ. ಆಧಾರವಿಲ್ಲದ ದೂರು ದಾಖಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸದಾನಂದ ಗೌಡ ಹೇಳಿದರು.
ಸರ್ಕಾರ ವಜಾ ಮಾಡುವುದಿಲ್ಲ. ಇದು ಜನರು ಕೊಟ್ಟಿರುವ ಆದೇಶ. ಕಾಂಗ್ರೆಸ್ಸಿಗರು ಮೊದಲು ಸೋನಿಯಾ ಅವರ ಸರ್ಕಾರ ಕೆಳಗಿಳಿಸಲಿ ಆಮೇಲೆ ನಮ್ಮನ್ನು ಪ್ರಶ್ನಿಸಲಿ ಎಂದರು.
ಭ್ರಷ್ಟರನ್ನು ಮಟ್ಟ ಹಾಕಲು ಬಿಜೆಪಿ ಬದ್ಧವಾಗಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. ಸದಾನಂದ ಗೌಡರ ಮಾತಿನ ವೈಖರಿ ಪ್ರಭಾವಿ ನಾಯಕ ಆಶೋಕ್ ಹಾಗೂ ನಿರಾಣಿ ಅವರ ಆರೋಪಗಳತ್ತ ನೆಟ್ಟಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.












Click it and Unblock the Notifications