ಇಷ್ಟಕ್ಕೂ ಯಡಿಯೂರಪ್ಪ ಬಂಧನದ ಬಗ್ಗೆ 'ಅನಂತ' ಮೌನ ಏಕೆಂದರೆ

bsy-jailed-but-hn-ananth-kumar-keeps-mum
ಬೆಂಗಳೂರು‌, ಅ.18: ಇಷ್ಟಕ್ಕೂ ಯಡಿಯೂರಪ್ಪ ಬಂಧನದ ಬಗ್ಗೆ ಸಂಸದ ಎಚ್. ಅನಂತಕುಮಾರ್ ಯಾಕೆ ಆ ಪಾಟಿ ಮೌನವಾಗಿದ್ದಾರೆಂದರೆ... ಅವರೀಗ ಭಾವಿ ಪ್ರಧಾನಿ ಲಾಲ ಕೃಷ್ಣ ಅಡ್ವಾಣಿ ಅವರ ಜನಚೇತನ ಯಾತ್ರೆಯ ಸಾರಥಿಯಾಗಿ ಬ್ಯುಸಿಯಾಗಿದ್ದಾರೆ. ಎಲ್.ಕೆ. ಅಡ್ವಾಣಿ ಅವರ ಬ್ಲೂ-ಐಯ್ಡ್ ಬಾಯ್ ಅನಂತಕುಮಾರ್ ಅವರು ಜನಚೇತನ ಯಾತ್ರೆಯ ನಿಮಿತ್ತ ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದಾರೆ.

ಆದ್ದರಿಂದ ಕರ್ನಾಟಕದಲ್ಲೇನಾಗುತ್ತಿದೆ ಎಂಬುದರ ಗೊಡವೆ ಅವರಿಗೆ ಬೇಡವಂತೆ. ಮೊದಲು ರಥ ಯಾತ್ರೆ, ನಂತರ ಜೈಲು ಯಾತ್ರೆ ಎಂಬ ಸರಳ ಸಿದ್ಧಾಂತ ಅವರದಾಗಿದೆಯಂತೆ. ಅದಕ್ಕಿಂತ ಹೆಚ್ಚಿಗೆ ಯಡಿಯೂರಪ್ಪ ಬಂಧನದ ಬಗ್ಗೆ ಅಡ್ವಾಣಿ ಅವರೇ 'ಚುಪ್ ಹೊ' ಎಂದು ಅನಂತಿಯನ್ನು ಗದರಿಕೊಂಡಿದ್ದಾರೆ.

ಜತೆಗೆ ಸ್ವತಃ ಅವರೂ ಯಾವುದೇ ಹೇಳಿಕೆ ನೀಡದೆ ಸುಮ್ಮಗಿದ್ದಾರೆ. ಅಷ್ಟೇ ಅಲ್ಲ, 'ಯಡಿಯೂರಪ್ನ ಜತೆ ಸೇರಬೇಡ' ಎಂದು ಸ್ವತಃ ಅಡ್ವಾಣಿ ಅವರೇ ಅನಂತಿಗೆ ಹೇಳಿ ಯಾವುದೋ ಕಾಲವಾಗಿದೆ.

ಆದ್ದರಿಂದ ಮನೆಯಜಮಾನ ಗದರಿಕೊಂಡಿರುವಾಗ ನನ್ನದೇನು ತಲೆಹರಟೆ ಎಂದು 'ಹಕ್ಕ' ಜೈಲು ಹಕ್ಕಿಯಾಗಿರುವ ಬಗ್ಗೆ 'ಬುಕ್ಕ' ಈ ಪರಿ ಕಾಷ್ಠ ಮೌನಕ್ಕೆ ಶರಣಾಗಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+