ಅಮೃತಸರದಲ್ಲಿ ವಿಮಾನದ ಟೈರ್ ಪಂಕ್ಚರ್: ರಾಜ್ಯದ 6 ಶಾಸಕರು ಪಾರು
ಅಮೃತಸರ,
ಅ.13: ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ 6 ಶಾಸಕರು ಗುರುವಾರ ಬೆಳಗ್ಗೆ ಪಂಜಾಬಿನ ಅಮೃತಸರದಲ್ಲಿ 10 ಗಂಟೆ ವೇಳೆಯಲ್ಲಿ ಸಂಭವಿಸಿದ ವಿಮಾನ ಆಕಸ್ಮಿಕದಲ್ಲಿ ಪ್ರಾಣಾಪಾಯದಿಂದ ಪಾರಾಗಿದದ್ದಾರೆ. id="toptextpromo">ಇಲ್ಲಿನ
ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ ವೇಸ್ ಗೆ ಸೇರಿದ ವಿಮಾನದ ಟೈರುಗಳು ಟೇಕಾಫ್ ವೇಳೆ ಪಂಕ್ಚರ್ ಆಯಿತು. ಆದರೆ ಹೆಚ್ಚಿನ ಅನಾಹುತವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಅಂದಾಜು
ಸಮಿತಿಯ ಸದಸ್ಯರಾದ ವಿಜಯಕುಮಾರ್, ತಿಪಟೂರು ಶಾಸಕ ನಾಗೇಶ್, ದೊಡ್ಡನಗೌಡ, ವೀರಭದ್ರಪ್ಪ, ಮಹದೇವ ಪ್ರಸಾದ್, ಅಮರೇಗೌಡ ಬಯ್ಯಾಪುರ ಸೇರಿದಂತೆ ಒಟ್ಟು ಆರು ಶಾಸಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇವರೆಲ್ಲ ಉತ್ತರ ಭಾರತ ಅಧ್ಯಯನ ಪ್ರವಾಸಕ್ಕೆಂದು ದೆಹಲಿಗೆ ತೆರಳುತ್ತಿದ್ದರು.











Click it and Unblock the Notifications