ಅಮೃತಸರದಲ್ಲಿ ವಿಮಾನದ ಟೈರ್ ಪಂಕ್ಚರ್: ರಾಜ್ಯದ 6 ಶಾಸಕರು ಪಾರು

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ ವೇಸ್ ಗೆ ಸೇರಿದ ವಿಮಾನದ ಟೈರುಗಳು ಟೇಕಾಫ್ ವೇಳೆ ಪಂಕ್ಚರ್ ಆಯಿತು. ಆದರೆ ಹೆಚ್ಚಿನ ಅನಾಹುತವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಅಂದಾಜು ಸಮಿತಿಯ ಸದಸ್ಯರಾದ ವಿಜಯಕುಮಾರ್, ತಿಪಟೂರು ಶಾಸಕ ನಾಗೇಶ್, ದೊಡ್ಡನಗೌಡ, ವೀರಭದ್ರಪ್ಪ, ಮಹದೇವ ಪ್ರಸಾದ್, ಅಮರೇಗೌಡ ಬಯ್ಯಾಪುರ ಸೇರಿದಂತೆ ಒಟ್ಟು ಆರು ಶಾಸಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇವರೆಲ್ಲ ಉತ್ತರ ಭಾರತ ಅಧ್ಯಯನ ಪ್ರವಾಸಕ್ಕೆಂದು ದೆಹಲಿಗೆ ತೆರಳುತ್ತಿದ್ದರು.












Click it and Unblock the Notifications