ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಗೆ ತಾತ್ಕಾಲಿಕ ಜಾಮೀನು: ಭ್ರಷ್ಟರಿಗೆ ಮಾನವೀಯತೆಯ ಅನುಕಂಪ ಏಕೆ?

By Srinath
|
Google Oneindia Kannada News

why-dr-hn-krishna-granted-interim-bail
ಬೆಂಗಳೂರು, ಅ.8: 'ಮೈ ಲಾರ್ಡ್, ಅ.10 ರಂದು ಸಾಕು ಮಗಳ ವಿವಾಹ ಇರುವುದರಿಂದ ನನಗೆ ದಯವಿಟ್ಟು ಜಾಮೀನು ನೀಡಿ' ಎಂದು 'ಲೋಕ ಸೇವಕ' ಕೃಷ್ಣ ಕಣ್ಣಿರು ಹಾಕುತ್ತಿದ್ದಂತೆ ನಗರದ ಎಂಟನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಕರಗಿ, ಮಾನವೀಯತೆ ಆಧಾರದ ಮೇಲೆ ಕೃಷ್ಣನಿಗೆ ತಾತ್ಕಾಲಿಕ ಜಾಮೀನು ನೀಡಿದ್ದಾರೆ.

ಆದರೆ 'ಭ್ರಷ್ಟರಿಗೆಲ್ಲ ಮಾನವೀಯತೆ, ಅನುಕಂಪ ದಯಪಾಲಿಸುವ ಜರೂರತ್ತು ಏನಿದೆ?' ಎಂದು ನಾಡಿನ ಪ್ರಾಜ್ಞಾವಂತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅ.12ರಂದು ಕೃಷ್ಣ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಅಂದು ಕೃಷ್ಣ ಮನೆಗಾ, ಸೆರೆ ಮನೆಗಾ? ಎಂಬುದು ನಿರ್ಧಾರವಾಗಲಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮಹಮ್ಮದ್ ಅನ್ವರ್ ಅವರು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಸಿಐಡಿ ಅಧಿಕಾರಿ ಪದ್ಮನಯನ ಅವರು ಅ. 4ರಂದೇ ವಿಚಾರಣೆಗೆ ಹಾಜರಾಗುಂತೆ ಕೃಷ್ಣಗೆ ನೋಟಿಸ್ ನೀಡಿದ್ದರು. ಆದರೆ ಅಂದು ಖಾಸಗಿ ಕೆಲಸ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕೃಷ್ಣ ನುಣುಚಿಕೊಂಡಿದ್ದರು.

ಆದ್ದರಿಂದ ಶುಕ್ರವಾರ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಬೆಳಿಗ್ಗೆ 10.30ರ ಸುಮಾರಿಗೆ ಪದ್ಮನಯನ ಅವರ ಕಚೇರಿಯಲ್ಲಿ ಕೃಷ್ಣನ ದರ್ಶನವಾಗುತ್ತಿದ್ದಂತೆ ಸಿಐಡಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಕೆಲ ಕಾಲ ವಿಚಾರಣೆ ನಡೆಸಿ, ಮಧ್ಯಾಹ್ನದ ವೇಳೆಗೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು.

English summary
Dr H N Krishna who had resgined recently as Information Commissioner was arrested by CID police in Bangalore on Oct 7. Also he was granted interim bail by 8th ACMM Court immediately. But many job aspirants who could not get employment through KPSC because of Dr H N Krishna are asking why Dr. Krishna granted interim bail?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X