ಈ ಬಾರಿ ಭಾರತಕ್ಕೂ ನೊಬೆಲ್ ಸಾಹಿತ್ಯ ಪ್ರಶಸ್ತಿ ಭಾಗ್ಯ?

ಕೆ. ಸಚ್ಚಿದಾನಂದನ್, ಮೂಲತಃ ಕೇರಳದವರಾಗಿದ್ದು ಈಗ ದೆಹಲಿಯಲ್ಲಿ ನೆಲೆಸಿರುವ ಮಲಯಾಳಂ ಕವಿ ಮತ್ತು ವಿಮರ್ಶಕ. ಇನ್ನು, ರಾಜಸ್ತಾನದ ಷೇಕ್ಸ್ ಪಿಯರ್ ಎಂದೇ ಗುರುತಿಸಲ್ಪಟ್ಟಿರುವ 85 ವರ್ಷದ ವಿಜಯದನ್ ದೇಥಾ ಸಣ್ಣ ಕತೆಗಾರ. ಈ ಹಿಂದೆ, ಕಮಲಾ ದಾಸ್ ಅವರ ಹೆಸರೂ ಇದೇ ರೀತಿ ಕೇಳಿಬಂದಿತ್ತು.
22 ಕವನ ಸಂಕಲನ, ಭಾಷಾಂತರದ 16 ಕವನ ಸಂಕಲನಗಳು ಸಚ್ಚಿದಾನಂದನ್ ಅವರ ಪ್ರಮುಖ ಕೃತಿಗಳು. ದೇಥಾ ಅವರು 800 ಸಣ್ಣ ಕತೆಗಳನ್ನು ಬರೆದಿದ್ದಾರೆ. ಹಬೀಬ್ ತನ್ವೀರ್ ಅವರ 'ಚರಣದಾಸ್ ಚೋರ್' ಮತ್ತು ಅಮೋಲ್ ಪಾಲೇಕರ ಅವರ 'ಪಹೇಲಿ' ಸೇರಿದಂತೆ ಇವರ ಕೆಲವು ಕತೆಗಳನ್ನು ನಾಟಕ ಮತ್ತು ಚಲನ ಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ.












Click it and Unblock the Notifications