ಎಟಿಎಂ ಗಾರ್ಡ್ ಹತ್ಯೆ, 2 ಗಂಟೆಯಲ್ಲೇ ಹಂತಕ ಬಲೆಗೆ

Corporation Bank AtM security gaurd murder, Bangalore
ಬೆಂಗಳೂರು, ಸೆ.29: ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಬೆಳಗ್ಗೆ ಎಟಿಎಂ ಸೆಕ್ಯುರಿಟಿ ಗಾರ್ಡ್ ಹತ್ಯೆ ಹಾಗೂ ದರೋಡೆ ಯತ್ನ ನಡೆದಿತ್ತು. ಈ ಘಟನೆ ನಡೆದ ಎರಡು ಗಂಟೆಯಲ್ಲೇ ನಗರ ಪೊಲೀಸರು ಪ್ರಕರಣವನ್ನು ಬೇಧಿಸಿ, ಹಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಟ್ನ ಮೂಲದ 22 ವರ್ಷದ ಯುವಕ ಸ್ಯಾಮುಯಲ್ ಎಂಬವನೇ ಗುರುವಾರ ಬೆಳಗ್ಗೆ ಸೆಕ್ಯುರಿಟಿ ಗಾರ್ಡ್ ಚಂದ್ರಪ್ಪ(55) ಎಂಬುವರನ್ನು ಬರ್ಬರವಾಗಿ ಕೊಂದಿದ್ದವನು ಎಂದು ದಕ್ಷಿಣ ವಲಯ ಡಿಸಿಪಿ ಸೋನಿಯಾ ನಾರಂಗ್ ಹೇಳಿದ್ದಾರೆ.

ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ನ ಎಟಿಎಂ ಕೇಂದ್ರದಲ್ಲಿ ನಡೆದ ಕೊಲೆಗೆ ಸಿಸಿಟಿವಿ ವಿಡಿಯೋ ತುಣುಕು ಸಹಾಯ ಮಾಡಿದೆ.

ನಡೆದಿದ್ದು ಹೇಗೆ?:
ಗುರುವಾರ ಮುಂಜಾನೆ 4.30ರ ಸುಮಾರಿಗೆ ಎಟಿಎಂ ದರೋಡೆಗೆ ಯತ್ನಿಸಿದ ಸ್ಯಾಮುಯಲ್ ಗೆ ಚಂದ್ರಪ್ಪ ಅಡ್ಡಿಪಡಿಸಿದ್ದಾನೆ. ಈ ಸಂದರ್ಭದಲ್ಲಿ ಚಂದ್ರಪ್ಪನ ತಲೆಗೆ ಕಬ್ಬಿಣದ ರಾಡ್ ನಲ್ಲಿ ಸ್ಯಾಮುಯಲ್ ಹೊಡೆಡಿದ್ದಾನೆ. ನಂತರ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಆದರೆ ನಂತರ ಎಟಿಎಂ ಹಣ ಕಸಿಯಲು ವಿಫಲ ಯತ್ನ ನಡೆಸಿದ್ದಾನೆ. ಕೊನೆಗೆ ಅಲ್ಲಿಂದ ಪರಾರಿಯಾಗಿದ್ದಾರೆ.

ಸಿಸಿಟಿವಿ ಫುಟೇಜ್ ನೋಡಿದ ಪೊಲೀಸರು ಚೀತಾ ಪೊಲೀಸ್ ಗಸ್ತು ವಾಹನ ಸಿಬ್ಬಂದಿಗೆ ಮೆಸೇಜ್ ಕೊಟ್ಟಿದ್ದಾರೆ. ಉತ್ತರಹಳ್ಳಿ ರಸ್ತೆ ಹತ್ತಿರ ಅನುಮಾನಸ್ಪದವಾಗಿ ತಿರುಗಿದ್ದ ಸ್ಯಾಮುಯಲ್(ಸೈಮನ್) ಅನ್ನು ಪೊಲೀಸರು ತಡೆದು ವಿಚಾರಿಸಿದ್ದಾರೆ.

ಸ್ಯಾಮುಯಲ್ ಬ್ಯಾಗ್ ನಲ್ಲಿ ರಕ್ತದ ಕಲೆ ಕಂಡು ಅನುಮಾನಗೊಂಡು ಬ್ಯಾಗ್ ಪರಿಶೀಲಿಸಿದಾಗ ಸುತ್ತಿಗೆ, ಉಳಿ, ರಾಡ್ ಮುಂತಾದ ಅಸ್ತ್ರಗಳು ಕಂಡಿವೆ. ಸುಬ್ರಮಣ್ಯ ಪುರ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಸೆಕ್ಯುರಿಟಿ ಗಾರ್ಡ್ ಕೊಲೆ ವಿಷಯ ಹೊರಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+