Get Updates
Get notified of breaking news, exclusive insights, and must-see stories!

ಕೆಎಲ್ ಕಾಮತ್ ಸ್ಮಾರಕ ಗ್ರಂಥಾಲಯ ಹೊನ್ನಾವರ

Vikas and Krishnanand Kamat (File photo)
ಬೆಂಗಳೂರು, ಸೆ. 22 : ಖ್ಯಾತ ಲೇಖಕ, ವಿದ್ವಾಂಸ, ಛಾಯಾಚಿತ್ರಕಾರ, ದಿವಂಗತ ಡಾ. ಕೃಷ್ಣಾನಂದ ಎಲ್ ಕಾಮತ್ (1934-2002) ಸ್ಮಾರಕ ಗ್ರಂಥಾಲಯ ಅವರ ತವರೂರು ಹೊನ್ನಾವರ(ಉತ್ತರ ಕನ್ನಡ ಜಿಲ್ಲೆ)ದಲ್ಲಿ ಅನಾವರಣಗೊಳ್ಳಲಿದೆ. ದಿನಾಂಕ 25 ಸೆಪ್ಟೆಂಬರ್ 2011, ಭಾನುವಾರ ಬೆಳಗ್ಗೆ 10 ಗಂಟೆ.

ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುವ ಪ್ರಸಿದ್ಧ ಲೇಖಕಿ ನೇಮಿಚಂದ್ರ ಅವರು "ಕಾಮತ್ ದತ್ತಿ ಉಪನ್ಯಾಸ" ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಈ ಸಾಲಿನ ಕಾಮತ್ ಸ್ಮಾರಕ ಪ್ರಶಸ್ತಿಯನ್ನು ಪತ್ರಕರ್ತ, ಲೇಖಕ ಪ್ರೊ. ನಿರಂಜನ ವಾನಳ್ಳಿ ಅವರಿಗೆ ಕೊಡಮಾಡಲಾಗುತ್ತದೆ.

"ಪರಿಸರಕ್ಕೆ ಕಾಮತರ ಕೊಡುಗೆ" ಶೀರ್ಷಿಕೆಯುಳ್ಳ ಕೃತಿಯನ್ನು ಡಾ. ರಮಾಕಾಂತ್ ಜೋಶಿ ಬಿಡುಗಡೆ ಮಾಡುವರು. ಕವಿ ಜಯಂತ್ ಕಾಯ್ಕಿಣಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಕೆ ಎಲ್ ಕಾಮತ್ ಅವರ ಪುತ್ರ ವಿಕಾಸ್ ಕಾಮತ್ ಗುರುವಾರ ಒನ್ ಇಂಡಿಯ ಕನ್ನಡಕ್ಕೆ ತಿಳಿಸಿದರು.

ಕೃಷ್ಣಾನಂದ ಕಾಮತ್ ಗ್ರಂಥಾಲಯದ ವಿಳಾಸ : ಲಕ್ಷ್ಮೀನಾರಾಯಣ ನಗರ, ಹೊನ್ನಾವರ 581 334 ಉತ್ತರ ಕನ್ನಡ ಜಿಲ್ಲೆ. ಗ್ರಂಥಾಲಯದ ದೂರವಾಣಿ ಸಂಖ್ಯೆ. (8387)222-888. [ಕೃಷ್ಣಾನಂದ ಕಾಮತ್ ಅವರ ಕೃತಿಗಳು]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+