ರಾಜೀನಾಮೆ ಕೊಟ್ಟ ನ್ಯಾ. ಪಾಟೀಲರ ಶ್ಲಾಘಿಸಿದ ಎಚ್ಡಿಕೆ

ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧ 150 ಕೋಟಿ ರುಪಾಯಿ ಗಣಿ ಲಂಚ ಆರೋಪ ಬಂದಾಗ ನನ್ನನ್ನು ಜೈಲಿಗೆ ಕಳುಹಿಸಲು ಕಾಂಗ್ರೆಸ್ಸಿಗರು ಒತ್ತಾಯಿಸಿದರು, ಹೋರಾಡಿದರು. ಅಕ್ರಮ - ಅನಧಿಕೃತ ಗಣಿಗಾರಿಕೆ ತಡೆಯಲು ಎಲ್ಲಿಯೂ ಮಾತನಾಡಲಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ನವರು ನನ್ನನ್ನು ಕೆಣಕುತ್ತಿದ್ದಾರೆ. ಗಣಿ ವಿಚಾರದಲ್ಲಿ ಕಾಂಗ್ರೆಸ್ಸಿಗರು ಕೂಡ ಜೈಲು ಸೇರಲಿದ್ದಾರೆ. ದಾಖಲೆಗಳು ಇಲ್ಲದೇ ನಾನು ಯಾವುದೇ ಆರೋಪಗಳನ್ನು ಮಾಡುವುದಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಆದೇಶಿಸಿದ್ದೆ ಎಂದು ಅವರು ಹೇಳಿದರು.












Click it and Unblock the Notifications